Tuesday, October 3, 2023

Latest Posts

‘ಕರ್ನಾಟಕ ಭಾರತ್​ ಗೌರವ ಕಾಶಿ ದರ್ಶನ’ ದಲ್ಲಿ ಬಿಹಾರದ ಗಯಾ ಕ್ಷೇತ್ರ: ರಾಜ್ಯ ಸರಕಾರ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಹುನಿರೀಕ್ಷಿತ ‘ಕರ್ನಾಟಕ ಭಾರತ್​ ಗೌರವ ಕಾಶಿ ದರ್ಶನ’ (Karnataka Bharat Gaurav Kashi Darshan) ರೈಲು ಯಾತ್ರೆಯಲ್ಲಿ ಬಿಹಾರದ ಗಯಾ ಕ್ಷೇತ್ರ ದರುಶನ ಸೇರ್ಪಡೆಗೊಳಿಸಲಾಗಿದೆ.

ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್​ಗಳ ಸಾಲಿಗೆ ಇದೀಗ ಬಿಹಾರದ ಗಯಾ ಕ್ಷೇತ್ರ ಸೇರ್ಪಡೆಯಾಗಿದೆ. ಆ ಮೂಲಕ 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ಸದರಿ ಪ್ಯಾಕೇಜ್​ಗೆ ಈ ಹಿಂದೆ ಸರ್ಕಾರದಿಂದ ನಿಗದಿ ಮಾಡಲಾಗಿದ್ದ ಸಹಾಯ ಧನ ರೂ.5000/- ಗಳ ಮೊತ್ತವನ್ನು ರೂ.7500 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

‘ಕರ್ನಾಟಕ ಭಾರತ್​ ಗೌರವ ಕಾಶಿ ದರ್ಶನ’ ಸದರಿ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ ಎಲ್​ಹೆಚ್​ಬಿ ಕೋಚ್ ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜೊತೆ ಸೇವಾ ನಿರತರಾಗಿರುತ್ತಾರೆ.

ಮುಂದಿನ ಪ್ರವಾಸ ಆಗಸ್ಟ್​ 29 ರಂದು ಹೊರಡಲಿದ್ದು, ಸೆಪ್ಟೆಂಬರ್​​​ 06ರಂದು ವಾಪಸ್ಸ್​ ಆಗಮಿಸಲಿದೆ. ಬಳಿಕ ಸೆಪ್ಟೆಂಬರ್​ 23ರಂದು ಆರನೇ ಟ್ರಿಪ್​ ಹೊರಟು, ಅಕ್ಟೋಬರ್​​​ 02 ರಂದು ವಾಪಸ್ಸ್​ ಆಗಲಿದ್ದಾರೆ. ಸದರಿ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!