ದಿಗಂತ ವರದಿ ವಿಜಯಪುರ:
ಬೈಕ್- ಕಾರು ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರನೊಬ್ಬ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಬಳಿ ನಡೆದಿದೆ. ಇಲ್ಲಿನ ಗೂಗಿಹಾಳದ ರಿಯಾಜ್ ಹುಸೇನ್’ಸಾಬ್ ಗಡೆದ (12) ಮೃತಪಟ್ಟ ಬಾಲಕ.
ಬಾಲಕ ರಿಯಾಜ್ ತನ್ನ ಸಂಬಂಧಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ, ಈ ಅಪಘಾತ ನಡೆದಿದೆ. ಬೈಕ್ ಸವಾರ ಕೂಡ ಗಂಭೀರ ಗಾಯಗೊಂಡಿದ್ದಾನೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.