ಬೈಕ್‌- ಕಾರು ಡಿಕ್ಕಿ, ಬೈಕ್ ಹಿಂಬದಿ ಸವಾರ ಸಾವು

ದಿಗಂತ ವರದಿ ವಿಜಯಪುರ:

ಬೈಕ್‌- ಕಾರು ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರನೊಬ್ಬ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಬಳಿ ನಡೆದಿದೆ. ಇಲ್ಲಿನ ಗೂಗಿಹಾಳದ ರಿಯಾಜ್ ಹುಸೇನ್’ಸಾಬ್ ಗಡೆದ (12) ಮೃತಪಟ್ಟ ಬಾಲಕ.

ಬಾಲಕ ರಿಯಾಜ್ ತನ್ನ ಸಂಬಂಧಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ, ಈ ಅಪಘಾತ ನಡೆದಿದೆ. ಬೈಕ್ ಸವಾರ ಕೂಡ ಗಂಭೀರ ಗಾಯಗೊಂಡಿದ್ದಾನೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!