(ಪೋಟೋ- ಬಂಧಿತ ಭಗವಾಲ್ ಸಿಂಗ್ ಮತ್ತವನ ಪತ್ನಿ ಲೈಲಾ)
ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇರಳದಿಂದ ವರದಿಯಾಗಿದೆ ಬೆಚ್ಚಿಬೀಳಿಸುವ ಮಾನವ ಬಲಿ ಪ್ರಕರಣ.
ಹಣಕಾಸಿನ ಉನ್ನತಿಯಾಗುತ್ತದೆ ಎಂಬ ಕಾರಣಕ್ಕೆ ಮನುಷ್ಯ ಬಲಿ ಕೊಟ್ಟ ಪ್ರಕರಣದಲ್ಲಿ ಕೊಚ್ಚಿಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ರೆಸ್ಟೊರೆಂಟ್ ಒಂದರ ಮಾಲಿಕ ಮೊಹಮ್ಮದ್ ಶಫಿ ಅಲಿಯಾಸ್, ವಶೀಕರಣದಲ್ಲಿ ತೊಡಗಿರುವ ಭಗವಾಲ್ ಸಿಂಗ್ ಮತ್ತವನ ಪತ್ನಿ ಲೈಲಾ ಬಂಧಿತರು.
ಇವರಿಬ್ಬರು ಸೇರಿ ರೊಸ್ಲಿ (49) ಮತ್ತು ಪದ್ಮಂ (52) ಎಂಬ ಇಬ್ಬರು ಮಹಿಳೆಯರನ್ನು ಹತ್ಯೆಗೈದಿದ್ದರಲ್ಲದೇ ಇವರ ಮಾಂಸವನ್ನೂ ಸೇವಿಸಿದ್ದರೆಂಬ ಆಘಾತಕಾರಿ ಮಾಹಿತಿ ಈಗ ಬೆಳಕಿಗೆ ಬರುತ್ತಿದೆ.
ಲಾಟರಿ ಮಾರಾಟಗಾರರಾಗಿದ್ದ ಈ ಇಬ್ಬರೂ ಮಹಿಳೆಯರನ್ನು ಅಶ್ಲೀಲ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೊಡುವುದಾಗಿ ನಂಬಿಸಿ ಹಂತಕರು ತಮ್ಮ ಬಲೆಗೆ ಬೀಳಿಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ