ಹೊಸದಿಗಂತ ವರದಿ ವಿಜಯಪುರ:
ಬೈಕ್ ಸ್ಕಿಡ್ ಆಗಿ ಯುವಕನೊಬ್ಬ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪುರ ಕ್ರಾಸ್ ಬಳಿ ನಡೆದಿದೆ. ಮೆಹಬೂಬ್ ನಗರದ ವರುಣ ಅಗಸರ (25) ಮೃತ ದುರ್ದೈವಿ.
ವರುಣ ಅಗಸರ ಹಾಗೂ ಬಸವರಾಜ ಅಗಸರ ಇಬ್ಬರೂ ಬೈಕ್ ನಲ್ಲಿ ಅಥಣಿ ತಾಲೂಕಿನ ಕಿಳೇಗಾಂವಗೆ ದೇವರ ದರ್ಶನಕ್ಕೆ ತೆರಳಿದ್ದು, ಮರಳಿ ಬರುವಾಗ ಈ ದುರ್ಘಟನೆ ನಡೆದಿದೆ. ವರುಣ ಅಗಸರ ಸ್ಥಳದಲ್ಲಿಯೇ ಮೃತಪಟ್ಟರೆ, ಬಸವರಾಜ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.