ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಬಿಜೆಪಿಯ 92 ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಕೇರಳದ ವಯನಾಡಿನಲ್ಲಿ ಕೆ.ಸುರೇಂದ್ರನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಅದೇ ರೀತಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಾಲಿವುಟ್ ನಟಿ ಕಂಗನಾ ರಣಾವತ್ , ಉತ್ತರ ಪ್ರದೇಶದ ಮೀರತ್ ನಿಂದ ಜನಪ್ರಿಯ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್ ಅವರಿಗೆ ಟಿಕೆಟ್ ನೀಡಿದೆ.
ಇನ್ನು ಫಿಲಿಬಿಟ್ ಕ್ಷೇತ್ರ ಕೂಡ ಭಾರಿ ಕುತೂಹಲ ಕೆರಳಿಸಿತ್ತು.ಈ ಕ್ಷೇತ್ರದಿಂದ ವರುಣ್ ಗಾಂಧಿಗೆ ಟಿಕೆಟ್ ನಿರಾಕರಿಸಲಾಗಿದೆ. ವರುಣ್ ಗಾಂಧಿ ಬದಲು ಜತಿನ್ ಪ್ರಸಾದ್ಗೆ ಟಿಕೆಟ್ ನೀಡಲಾಗಿದೆ. ಸುಲ್ತಾನಪುರ ಕ್ಷೇತ್ರದಿಂದ ಮೇನಕಾ ಗಾಂಧಿ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಇತ್ತ ಘಾಜಿಯಾಬಾದ್ನಿಂದ ಸಂಸದರಾಗಿದ್ದ ನಿವೃತ್ತ ಸೇನಾಧಿಕಾರಿ ವಿಕೆ ಸಿಂಗ್ ಈ ಬಾರಿ ಸ್ಪರ್ಧೆಗೆ ನಿರಾಕರಿಸಿದ್ದರು. ಹೀಗಾಗಿ ಈ ಕ್ಷೇತ್ರದಿಂದ ಅತುಲ್ ಗರ್ಗ್ಗೆ ಟಿಕೆಟ್ ನೀಡಲಾಗಿದೆ.
ಇತರೆ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳು
ವಯನಾಡು ಲೋಕಸಭಾ ಕ್ಷೇತ್ರ-ಕೆ.ಸುರೇಂದ್ರನ್
ಆಲತ್ತೂರ ಲೋಕಸಭಾ ಕ್ಷೇತ್ರ-ಟಿ.ಎನ್.ಸರಾಸು
ಎರ್ನಾಕುಲಂ ಲೋಕಸಭಾ ಕ್ಷೇತ್ರ-ಕೆ.ಎಸ್.ರಾಧಾಕೃಷ್ಣನ್
ಕೊಲ್ಲಂ ಲೋಕಸಭಾ ಕ್ಷೇತ್ರ-ಜಿ.ಕೃಷ್ಣಕುಮಾರ್
ಮಹಾರಾಷ್ಟ್ರದ ಭಂಡಾರ-ಗೊಂದಿಯಾ-ಸುನೀಲ್ ಬಾಬುರಾವ್ ಮೇಂಢೆ
ಮಹಾರಾಷ್ಟ್ರದ ಗಡ್ಚಿರೋಲಿ-ಚಿಮೂರ -ಅಶೋಕ್ ಮಹದೇವರಾವ್ ನೆತೆ
ಮಹಾರಾಷ್ಟ್ರದ ಸೊಲ್ಲಾಪುರ -ರಾಮ್ ಸಾತ್ಪುತೆ
ಮಹಾರಾಷ್ಟ್ರದ ಔರಂಗಬಾದ್ -ಸುಶೀಲ್ ಕುಮಾರ್ ಸಿಂಗ್
ಮಹಾರಾಷ್ಟ್ರದ ನವಾಡ -ವಿವೇಕ್ ಠಾಕೂರ್
ಮಿಜೋರಾಂ -ವನ್ಲಾಲ್ಹ್ಮುಕ
ದಕ್ಷಿಣ ಗೋವಾ -ಪಲ್ಲವಿ ಶ್ರೀನಿವಾಸ ಡೆಂಪೋ
ಹರಿಯಾಣ ಕುರುಕ್ಷೇತ್ರ -ನವೀನ್ ಜಿಂದಾಲ್
ಬಿಹಾರದ ಪಶ್ಚಿಮ ಚಂಪಾರಣ್ -ಸಂಜಯ್ ಜೈಸ್ವಾಲ್
ಹಿಮಾಚಲ ಪ್ರದೇಶದ ಮಂಡಿ -ಕಂಗನಾ ರಣಾವತ್
ಉತ್ತರ ಪ್ರದೇಶದ ಸುಲ್ತಾನ್ಪುರ -ಮನೇಕಾ ಗಾಂಧಿ