ಹೊಸದಿಗಂತ ವರದಿ,ಬಳ್ಳಾರಿ:
ಅಭಿವೃದ್ಧಿಗೆ ಇನ್ನೊಂದು ಹೆಸರೇ ಬಿಜೆಪಿ, ಕಾಂಗ್ರೆಸ್ ನವರಂತೆ ಸುಳ್ಳು ಹೇಳುವ ಸಂಸ್ಕೃತಿ ನಮ್ಮದಲ್ಲ, ಬಿಜೆಪಿ ಅಭಿವೃದ್ಧಿಗೆ ಹೆಸರಾದ ಪಕ್ಷ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದ 35ನೇ ವಾರ್ಡ್ ಪ್ರದೇಶದ ಭತ್ರಿ ರಸ್ತೆಗಳ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ನಗರದ ಪ್ರಭುದ್ದ ಮತದಾರರು ಸಾಕಷ್ಟು ಅಭಿವೃದ್ಧಿ ನಿರೀಕ್ಷೆ ಇಟ್ಟುಕೊಂಡು ನಮ್ಮ ಚುನಾಯಿಸಿದ್ದು, ಇಲ್ಲಿವರೆಗೆ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸಿರುವೆ, ಬರುವ ದಿನಗಳಲ್ಲಿ ಇನ್ನೂ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ಭಾಜಪ ನಗರ ಘಟಕದ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ, ಮಹಾನಗರ ಪಾಲಿಕೆ ಸದಸ್ಯರಾದ ರಾಜೇಶ್ವರಿ ಸುಬ್ಬರಾಯಡು, ಮೊತ್ಕರ್ ಶ್ರೀನಿವಾಸ್, ವಿ.ಶ್ರೀನಿವಾಸ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಲೋಕನಾಥ್, ಎಪಿಎಂಸಿ ಸದಸ್ಯ ಕೃಷ್ಣಾರೆಡ್ಡಿ, ಭಾಜಪ ಮುಖಂಡರಾದ ಉಜ್ವಲಾ ಶ್ರೀಧರ, ಎಚ್. ತಿಪ್ಪೇಸ್ವಾಮಿ, ಇ. ರಾಮಪ್ಪ, ಗಿರಿ ಮಲ್ಲಪ್ಪ, ಕೃಷ್ಣ ಮೂರ್ತಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಅನಂತಕುಮಾರ್, ಸೋಮಶೇಖರ್ ರೆಡ್ಡಿ ಅಭಿಮಾನ ಸಂಘದ ಅಧ್ಯಕ್ಷ ಪ್ರತಾಪ್ ರೆಡ್ಡಿ, ಶಕ್ತಿ ಕೇಂದ್ರ ಸದಸ್ಯರು, ಕಾರ್ಯಕರ್ತರು, ಸ್ಥಳೀಯರು ಭಾಗವಹಿಸಿದ್ದರು.
ನಂತರ ನಗರದ 37ನೇ ವಾರ್ಡ್ ನಲ್ಲಿ ಭಾನುವಾರ ಸುಮಾರು 17ಲಕ್ಷ ರೂ.ವೆಚ್ಚದಲ್ಲಿ ಯಂಥ್ರೋಧಾರಕ ಆಂಜಿನೇಯ ದೇವಸ್ಥಾನದ ಸುತ್ತಲು ಬಿ.ಟಿ. ರಸ್ತೆ ಕಾಮಗಾರಿಗೆ ಶಾಸಕ ಸೋಮಶೇಖರ್ ರೆಡ್ಡಿ ಅವರು, ಭೂಮಿ ಪೂಜೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಟಿ. ಶ್ರೀನಿವಾಸ್ ಮೋತ್ಕರ್. ಮೊಹಮ್ಮದ್.ಎಪಿಎಂಸಿ ಸದಸ್ಯ ಜಿ, ಕೃಷ್ಣಾ ರೆಡ್ಡಿ, ವಾರ್ಡಿನ ಪ್ರಮುಖರಾದ ಭೀಮಲಿಂಗ.ಪ್ರವೀಣ್ ರೆಡ್ಡಿ. ಸುಧಕಾರ್. ರೈತ ಮೋರ್ಚಾದ ನಾರಾಯಣ. ಹಾಗೂ ಖಾಜಾ ಇತರರು ಭಾಗವಹಿಸಿದ್ದರು.