ನಿನ್ನೆ ಜೂ.ಎನ್‌ಟಿಆರ್‌, ಇಂದು ನಿತಿನ್: ತೆಲುಗು ಹೀರೋಗಳ ಮೇಲೆ ಕಣ್ಣಿಟ್ಟ ಬಿಜೆಪಿ ಹೈಕಮಾಂಡ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲುಗು ರಾಜ್ಯಗಳಲ್ಲಿ ಅಧಿಕಾರ ಸಾಧಿಸುವ ಗುರಿ ಇಟ್ಟುಕೊಂಡು ರಣತಂತ್ರಗಳನ್ನು ಮಾಡುತ್ತಿರುವ ಬಿಜೆಪಿ, ತೆಲುಗು ಹೀರೋಗಳ ಮೇಲೆ ಕಣ್ಣಿಟ್ಟಿದೆಯೇ? ಟಾಲಿವುಡ್ ಹೀರೋಗಳನ್ನು ತಮ್ಮತ್ತ ತಿರುಗಿಸಲು ಕಮಲ ಕೆಲಸ ಮಾಡುತ್ತಿದೆಯೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಉದ್ಭವವಾಗಿದೆ. ಇತ್ತೀಚೆಗಷ್ಟೇ ತೆಲಂಗಾಣಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಅವರನ್ನು ಭೇಟಿ ಮಾಡಿರುವುದು ತೆಲುಗು ರಾಜ್ಯಗಳ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯಲಿದೆ. ಮತ್ತೊಬ್ಬ ಬಿಜೆಪಿ ನಾಯಕ ಟಾಲಿವುಡ್ ನಾಯಕನನ್ನು ಭೇಟಿಯಾಗಲಿದ್ದಾರೆ.

ಶನಿವಾರ (ಇಂದು) ತೆಲಂಗಾಣಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಟಾಲಿವುಡ್ ಯುವ ಹೀರೋ ನಿತಿನ್ ಅವರನ್ನು ಭೇಟಿ ಮಾಡಲಿದ್ದಾರೆ. ಹನುಮಕೊಂಡದ ಕಲಾ ಕಾಲೇಜಿನಲ್ಲಿ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಜೆಪಿ ನಡ್ಡಾ ಆಗಮಿಸುತ್ತಿದ್ದಾರೆ. ಈ ವೇಳೆ ಜೆಪಿ ನಡ್ಡಾ ಅವರು ನಟ ನಿತಿನ್ ಅವರನ್ನು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಲಿದ್ದಾರೆ. ತೆಲಂಗಾಣದಾದ್ಯಂತ ಬಿಜೆಪಿಯ ಪ್ರಮುಖ ನಾಯಕರು ಸತತವಾಗಿ ತೆಲುಗು ಹೀರೋಗಳನ್ನು ಭೇಟಿ ಮಾಡಲು ಹೊರಟಿರುವುದು ಬಿಸಿ ಟಾಪಿಕ್ ಆಗಿದೆ.

ನಿನ್ನೆ ಜೂನಿಯರ್ ಎನ್ ಟಿಆರ್, ಇಂದು ನಿತಿನ್.. ತೆಲುಗು ಹೀರೋಗಳ ಜೊತೆ ಬಿಜೆಪಿಯ ಟಾಪ್ ನಾಯಕರು ಭೇಟಿಯಾಗುತ್ತಿರುವುದರ ಹಿಂದೆ ಚುನಾವಣಾ ತಂತ್ರ ಇರಬಹುದು ಎಂದು ನಂಬಲಾಗಿದೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೆಲುಗು ಹೀರೋಗಳನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!