ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗ ಸಿಎಂ ಸಿದ್ದರಾಮಯ್ಯ ಮೌನ ಮುರಿದಿದ್ದು, ಈ ಮೈತ್ರಿ ಅಪವಿತ್ರ ಎಂದು ಲೇವಡಿ ಮಾಡಿದ್ದಾರೆ.
ನಾವು ಜಾತ್ಯತೀತರು ಎಂದು ಜೆಡಿಎಸ್ ಹೇಳಿಕೊಂಡು ಬಂದಿದೆ, ಆದರೆ ತಮ್ಮ ಸಿದ್ಧಾಂತಗಳನ್ನು ಬದಿಗಿಟ್ಟು ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿದೆ ಎಂದಿದ್ದಾರೆ.
ತಮ್ಮ ಪಕ್ಷದ ಬುನಾದಿಯನ್ನು ಯಾರೂ ಮರೆಯಬಾರದು, ಇಷ್ಟು ಸುಲಭವಾಗಿ ಪಕ್ಷ ತನ್ನ ನಿಲುವನ್ನು ಗಾಳಿಗೆ ತೂರೋದಕ್ಕೆ ಹೇಗೆ ಸಾಧ್ಯ ಎಂದಿದ್ದಾರೆ.