ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ( MLA Sathish Reddy ) ಅವರ ಹತ್ಯೆಗೆ ಸುಪಾರಿ ಪಡೆದು, ಸಂಚು ರೂಪಿಸಿದ್ದ ಇಬ್ಬರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಹಲವು ದಿನಗಳಿಂದ ಶಾಸಕ ಸತೀಶ್ ರೆಡ್ಡಿಯನ್ನು ಹಿಂಬಾಲಿಸಿಕೊಂಡು ಇಬ್ಬರು ಫಾಲೋ ಮಾಡುತ್ತಿದ್ದರು.ಇದನ್ನು ಗಮನಿಸಿದ್ದ ಶಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿಯ ಮೇರೆಗೆ ಇಂದು ರೌಡಿ ಶೀಟರ್ ನಾಗನ ಸಹಚರರು ಎನ್ನಲಾದಂತ ಆಕಾಶ್ ಹಾಗೂ ಗಿರೀಶ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳು ಶಾಸಕ ಸತೀಶ್ ರೆಡ್ಡಿಯನ್ನು ಹತ್ಯೆಗೈಯೋದಕ್ಕೆ 2 ಕೋಟಿಗೆ ಸುಪಾರಿ ಪಡೆದು, ಫಾಲೋ ಮಾಡುತ್ತಿದ್ದರು ಎನ್ನಲಾಗುತ್ತಿದೆ.