ಪದ್ಮಶ್ರೀ ಕೇಶವಮೂರ್ತಿ ಅವರನ್ನು ಸನ್ಮಾನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು

ದಿಗಂತ ವರದಿ ಶಿವಮೊಗ್ಗ:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ನಗರಕ್ಕೆ ಸಮೀಪದ ಹೊಸಹಳ್ಳಿ ಗ್ರಾಮಕ್ಕೆ ಆಗಮಿಸಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹೆಚ್.ಆರ್.ಕೇಶವಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸುಮಾರು 20 ನಿಮಿಷಗಳ ಕಾಲ ಕೇಶವಮೂರ್ತಿಗಳ ಮನೆಯಲ್ಲೇ ಇದ್ದ ನಳಿನ್‌ಕುಮಾರ್ ಕಟೀಲ್ ಅವರು ಕೇಶವಮೂರ್ತಿಗಳೊಂದಿಗೆ ಊಭಯ ಕುಶಲೋಪರಿ ನಡೆಸಿದರು. ಬಳಿಕ ಗಮಕ ವಾಚನವನ್ನು ಆಲಿಸಿದರು. ಕುಮಾರವ್ಯಾಸ ಭಾರತದ ಆಯ್ದ ಪದ್ಯಗಳನ್ನು ಕಟೀಲ್ ಅವರ ಎದುರಿಗೆ ಕೇಶವಮೂರ್ತಿ ಅವರು ವಾಚಿಸಿದರು.
ಬಳಿಕ, ಪ್ರಶಸ್ತಿ ಸ್ವೀಕರಿಸಲು ನವದೆಹಲಿಗೆ ಬನ್ನಿ. ಅಲ್ಲಿ ನಮ್ಮದೇ ನಿವಾಸ ಇದೆ. ನಿಮಗೆ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ನಳಿನ್‌ಕುಮಾರ್ ಆಹ್ವಾನಿಸಿದರು. ಈ ವೇಳೆ ಹೊಸಹಳ್ಳಿ ವೆಂಟಕರಾಮ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರಿಕೃಷ್ಣ, ಪ್ರಮುಖರಾದ ನಟರಾಜ್, ಹೃಷಿಕೇಶ್ ಪೈ, ಗ್ರಾಮಸ್ಥರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!