ಹೊಸದಿಗಂತ ವರದಿ, ವಿಜಯನಗರ
ಶ್ರೀಕೃಷ್ಣದೇವರಾಯರು ಆಳಿದ ಈ ಪುಣ್ಯ ಭೂಮಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಇಲ್ಲಿ ತೆಗದುಕೊಳ್ಳುವ ಎಲ್ಲ ತೀರ್ಮಾನಗಳು ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಲಿವೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ಸಂತೋಷದಿಂದ ಈ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದೇವೆ, ಮುಂಬರುವ ಚುನಾವಣೆಯಲ್ಲಿ 150+ ಹೆಚ್ಚು ಸ್ಥಾನಗಳು ನಮಗೆ ದೊರೆಯುವ ವಿಶ್ವಾಸವಿದೆ. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧೆಗಳೇ ನಮಗೆ ಶ್ರೀರಕ್ಷೆಯಾಗಲಿದೆ. ಪಂಚರಾಜ್ಯ ಚುನಾವಣೆಯ ತಂತ್ರವನ್ನೇ ಇಲ್ಲೂ ಬಳಸಲಾಗುತ್ತಿದೆ. ನಮ್ಮ ಗುರಿ ತಲುಪುವ ವಿಶ್ವಾಸವಿದೆ ಎಂದರು.
ವಿಜಯನಗರ ಅಂದರೇ ಒಂದು ರೋಮಾಂಚನ, ಇತಿಹಾಸವಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ, ವಿದ್ಯಾರಣ್ಯರು ಈ ಪುಣ್ಯ ಭೂಮಿಯನ್ನು ಆಯ್ಕೆ ಮಾಡಿ, ಸಾಮ್ರಾಜ್ಯ ಕಟ್ಟಿದ್ದಾರೆ, ಈ ಪುಣ್ಯ ಭೂಮಿಯಲ್ಲಿ ತೆಗದುಕೊಳ್ಳುವ ನಿರ್ಧಾರಗಳು ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಯ ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿದ್ದೇವೆ, ಎಲ್ಲ ಪಕ್ಷಗಳು ಚುನಾವಣೆ ಬಂದಾಗ ಪಕ್ಷದ ಸಂಘಟನೆ, ತಂತ್ರಗಾರಿಕೆ ಮಾಡ್ತಾರೆ, ನಮ್ಮದು ಹಾಗಲ್ಲ, 365 ದಿನವೂ ನಮ್ಮ ಪಕ್ಷದ ಸಂಘಟನೆ ನಡೆಯಲಿದೆ, ಎಲ್ಲರಂತೆ ನಮ್ಮ ಪಕ್ಷವಲ್ಲ, ನಮ್ಮ ತತ್ವ ಸಿದ್ದಾಂತಗಳೇ ಬೇರೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ