April 28, 2026
Tuesday, April 28, 2026
spot_img

ಬಿಜೆಪಿ‌ ಕಾರ್ಯಕರ್ತೆ ಸುಜಾತ ಹಂಡಿ‌ ಮೇಲೆ ಹಲ್ಲೆ: ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಹುಬ್ಬಳ್ಳಿ:

ಬಿಜೆಪಿ‌ ಕಾರ್ಯಕರ್ತೆ ಸುಜಾತ ಹಂಡಿ‌ ಅವರ ಮೇಲೆ ಹಲ್ಲೆ‌ ನಡೆಸಿ ಜೀವ ಬೆದರಿಕೆ ಹಾಕಿರುವ ಕುರಿತು ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಸೇರಿದಂತೆ ೯ ಜನರ ವಿರುದ್ಧ ಕೇಶ್ವಾಪುರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಜಾತ ಹಂಡಿ ಅವರ ಸಹೋದರ ಮರಿಯಾದಾಸ್ ಎಂಬುವರು ದೂರು ನೀಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಇವರೆಲ್ಲರೂ ಜಗಳ‌ ತೆಗೆದು ನಮ್ಮ‌ ಸಹೋದರಿ ಸುಜಾತ ಮೇಲೆ ಹಲ್ಲೆ‌ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಡೇವಿಡ್ ಹಾಗೂ ಪ್ರಶಾಂತ ಎಂಬುವರು ಈ ವೇಳೆ ನಮ್ಮ‌ಅಕ್ಕ ಹಾಗೂ ತಾಯಿ ಸೀರೆ ಎಲೆದಾಡಿ, ಹಲ್ಲೆ‌ ನಡೆಸಿ ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಮರಿಯಾದಾಸ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !