ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಆರ್ ಪುರಂನ ನಿಸರ್ಗ ಲೇಔಟ್ನಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್ನಲ್ಲಿ ಇಟ್ಟು ಹೋಗಲಾಗಿದೆ.
ಡ್ರಮ್ನಿಂದ ದುರ್ವಾಸನೆ ಬಂದ ಕಾರಣ ಸಮೀಪದ ನಿವಾಸಿಗಳ ಬಂದು ಪರಿಶೀಲಿಸಿದಾಗ ಬಿಜೆಪಿ ಕಾರ್ಯಕರ್ತೆ ಸುಶೀಲಮ್ಮ(65) ಮೃತದೇಹ ಎಂದು ತಿಳಿದುಬಂದಿದೆ. ಮೇಲ್ಭಾಗ ಹಾಗೇ ಬಿಟ್ಟು ಕಾಲು, ಕೈಗಳನ್ನು ಕತ್ತರಿಸಲಾಗಿದೆ.
ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿ ಒಂದು ದಿನ ಆಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಳಗ್ಗೆ ಸುಶೀಲಮ್ಮ ತಮ್ಮ ಮಗಳ ಜೊತೆ ಕಡೇ ಬಾರಿ ಕಾಣಿಸಿಕೊಂಡಿದ್ದರು. ಸುಶೀಲಮ್ಮ ಕೆಲವೊಮ್ಮೆ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿ, ಒಂದೆರಡು ಗಂಟೆ ಬಿಟ್ಟು ವಾಪಾಸಾಗುತ್ತಿದ್ದರು. ಆದರೆ ಹಲವು ಬಾರಿ ದಿನಗಳಾದರೂ ಅವರು ವಾಪಾಸ್ ಬರುತ್ತಿರಲಿಲ್ಲ. ಈ ಬಾರಿ ಕಾಣೆಯಾದಾಗಲು ಕುಟುಂಬದವರು ಅವರೇ ವಾಪಾಸ್ ಬರುತ್ತಾರೆ ಎಂದು ತಿಳಿದುಕೊಂಡಿದ್ದರು.
ಚುನಾವಣಾ ಪ್ರಚಾರದ ವೇಳೆ ಸುಶೀಲಮ್ಮನಿಗೆ ದಿನೇಶ್ ಎಂಬಾತನ ಪರಿಚಯವಾಗಿತ್ತು. ಆತ ಆಗಾಗ ಬಂದು ಹೋಗಿ ಮಾಡುತ್ತಿದ್ದ. ದುಡ್ಡಿಗಾಗಿ ಆತನೇ ಕೊಲೆ ಮಾಡಿರುವ ಶಂಕೆ ಇರುವ ಕಾರಣ ಆತನನ್ನು ವಶಕ್ಕೆ ಪಡೆಯಲಾಗಿದೆ.