ಹೊಸದಿಗಂತ , ಬಳ್ಳಾರಿ:
ಬೆಂಗಳೂರಿನ ಶಕ್ತಿ ಕೇಂದ್ರದಲ್ಲೇ ರಾಜ್ಯಸಭೆ ನೂತನ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು, ಪಾಕಿಸ್ತಾನ್ ಜಿಂದ ಬಾದ್ ಘೋಷಣೆ ಕೂಗಿದ ಕ್ರಮ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಬಳ್ಳಾರಿ ನಗರದ ಮೋತಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಯುವ ಮೋರ್ಚಾ ನೂರಾರು ಕಾರ್ಯಕರ್ತರು, ಪಕ್ಷದ ಮುಖಂಡರು, ಮೋತಿ ವೃತ್ತದ ಬಳಿ ಜಮಾಯಿಸಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ನಾಸೀರ್ ಹುಸೇನ್ ಅವರ ವಿರುದ್ದ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಸ್.ಸಿದ್ದಪ್ಪ ಅವರು ಮಾತನಾಡಿ, ಕೂಡಲೇ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಅವರನ್ನು ಅಮನತ್ತುಗೊಳಿಸಬೇಕು, ದೇಶವಿರೋಧಿ ಘೋಷಣೆ ಕುಗಿದವರನ್ನು ಕೂಡಲೇ ಬಂಧಿಸಬೇಕು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಸಬೇಕು, ಬಳ್ಳಾರಿ ಮರ್ಯಾದೆ ಹಾಳು ಮಾಡಿದ ನಾಸೀರ್ ಹುಸೇನ್ ವಿರುದ್ದ ದೇಶ ದ್ರೋಹ ಪ್ರಕರಣ ದಾಖಲಿಸಿ, ಬೆಂಬಲಿಗರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಬುಡಾ ಕಚೇರಿ ಆವರಣದಲ್ಲಿರುವ ನಾಸೀರ್ ಹುಸೇನ್ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರನ್ನು ನಿಯಂತ್ರಿಸಲು ಪೋಲೀಸ್ ರು ಹರಸಾಹಸಪಟ್ಟರು.
ಈ ಸಂದರ್ಭದಲ್ಲಿ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಎಸ್.ಗುರುಲಿಂಗನಗೌಡ, ಓಬಳೇಶ್, ಡಾ.ಮಹಿಪಾಲ್, ಪಾಲಿಕೆ ಸದಸ್ಯ ಹನುಮಂತ ಗುಡಿಗಂಟೆ, ಅಡವಿಸ್ವಾಮಿ, ಸಿದ್ದೇಶ್ ಉಪ್ಪಾರ್, ಕೆ.ವೆಂಕಟೇಶ, ಸುಗುಣ, ಸುಮರೆಡ್ಡಿ, ಶ್ಯಾಮ್ ಸುಂದರ್, ಮಧು ಕೆ.ಆರ್.ವೀರಶೇಖರ್ ರೆಡ್ದಿ ಸೇರಿದಂತೆ ಇತರರು ಭಾಗಿಯಾಗಿದ್ದರು.