ಜಮ್ಮುವಿನಾದ್ಯಂತ ಬ್ಲಾಕ್ ಔಟ್ ಘೋಷಣೆ: ಮನೆಯಲ್ಲೇ ಇರುವಂತೆ ಜನರಿಗೆ ಕರೆಕೊಟ್ಟ ಸಿಎಂ ಒಮರ್ ಅಬ್ದುಲ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಜಮ್ಮುವಿನ ಮೇಲೆ ಪಾಕಿಸ್ತಾನ ಮತ್ತೆ ಡ್ರೋನ್ ಗಳ ದಾಳಿಗೆ ಯತ್ನಿಸಿದೆ.ಜಮ್ಮುವಿನಾದ್ಯಂತ ಬ್ಲಾಕ್ ಔಟ್ ಘೋಷಣೆ ಮಾಡಲಾಗಿದೆ. ಜಮ್ಮು ಸಿಟಿ ಸಂಪೂರ್ಣ ಕತ್ತಲಮಯವಾಗಿದೆ.

ಈ ಸಂದರ್ಭ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಜನರ ಬಳಿ ವಿಶೇಷ ಮನವಿ ಮಾಡಿದ್ದು, ಮುಂದಿನ ಕೆಲವು ಗಂಟೆಗಳ ಕಾಲ ಮನೆಯಲ್ಲೇ ಇರಿ ಎಂದು ಹೇಳಿದ್ದಾರೆ.

ಜಮ್ಮು ನಗರದಾದ್ಯಂತ ಸೈರನ್ ಸದ್ದು ಕೇಳಿ ಬರುತ್ತಿದೆ. ಪ್ರತಿಯೊಬ್ಬರಲ್ಲೂ ನಾನು ಒಂದು ಮನವಿ ಮಾಡುತ್ತೇನೆ. ಜಮ್ಮುವಿನ ಪ್ರತಿಯೊಂದು ನಗರದ ನಿವಾಸಿಗಳು ಮನೆಯಲ್ಲೇ ಇರಿ. ಮುಂದಿನ ಕೆಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಬರಬೇಡಿ.ಯಾವುದೇ ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಧಿಕೃತವಾದ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಜನರ ಬಳಿ ಕೇಳಿಕೊಂಡಿದ್ದಾರೆ.

ಇತ್ತಜಮ್ಮು-ಕಾಶ್ಮೀರದ ಸಾಂಬಾ ಸೆಕ್ಟರ್ ಮೇಲೆ ಡ್ರೋನ್​ಗಳ ದಾಳಿ ನಡೆದಿದ್ದು, ಆ ಡ್ರೋನ್​ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ವಾಯು ರಕ್ಷಣಾ ವ್ಯವಸ್ಥೆ ಮೂಲಕ ಡ್ರೋನ್​ಗಳನ್ನು ಭಾರತ ಸೇನೆ ಹೊಡೆದುರುಳಿಸಿದೆ. ಜಮ್ಮುವಿನಲ್ಲಿ ಮಾತ್ರವಲ್ಲದೆ ಪಂಜಾಬ್​ನ ಪಠಾಣ್​ಕೋಟ್, ಫಿರೋಜ್​ಪುರದ ಮೇಲೂ ಡ್ರೋನ್ ದಾಳಿ ನಡೆಸಲಾಗಿದೆ. ಹಾಗೇ, ರಾಜಸ್ಥಾನದ ಪೋರ್ಕಾನ್​ನಲ್ಲೂ ಪಾಕಿಸ್ತಾನದ ಡ್ರೋನ್​ಗಳನ್ನು ಭಾರತ ಸೇನೆ ಹೊಡೆದುರುಳಿಸಿದೆ. ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಶೆಲ್ ದಾಳಿ ತೀವ್ರಗೊಳಿಸಿರುವ ಪಾಕಿಸ್ತಾನ ಸೇನೆ ಕುಪ್ವಾರಾ, ನೌಗಾಮ್, ಪೂಂಚ್ ಸೆಕ್ಟರ್​ನಲ್ಲಿ ಶೆಲ್ ದಾಳಿ ನಡೆಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!