ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮೇಶ್ವರಂ ಕೆಫೆಯ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ರಾಮೇಶ್ವರಂ ಕೆಫೆಯಲ್ಲಿ ಟೈಮರ್ ಇಟ್ಟು ತೆರಳಿದ ಆರೋಪಿ ಹೂಡಿಯ ಬಳಿ ಬಂದು ಬಟ್ಟೆ ಬದಲಿಸಿದ್ದಾನೆ. ಗುರುತು ಸಿಗಬಾರದೆಂದು ಸಾಕಷ್ಟು ಬಟ್ಟೆಗಳನ್ನು ಬದಲು ಮಾಡಿದ್ದಾರೆ.
ಹೂಡಿಯ ಮಸೀದಿ ಬಳಿ ಬಟ್ಟೆ ಬದಲಿಸಿದ ವೇಳೆ ಟೋಪಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಟೋಪಿಯನ್ನು ಸದ್ಯ ಪೊಲೀಸರು ಸೀಝ್ ಮಾಡಿದ್ದಾರೆ.
ಇದೀಗ ಬಾಂಬರ್ ತುಮಕೂರು ಮೂಲಕ ಬಳ್ಳಾರಿ ತಲುಪಿದ್ದು, ಬೀದರ್ನತ್ತ ಪ್ರಯಾಣ ಬೆಳೆಸಿದ್ದಾನೆ ಎನ್ನಲಾಗಿದೆ. ಆರೋಪಿಯು ಹಿಂದಿ ಮಾತನಾಡುತ್ತಿದ್ದ ಎನ್ನುವ ಮಾಹಿತಿಯೂ ದೊರೆತಿದ್ದು, ನಮ್ಮ ರಾಜ್ಯದವನಲ್ಲ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸದ್ಯ ಆರೋಪಿ ಮುಖ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ತನಿಖೆಗೆ ಸಹಾಯವಾಗಲಿದೆ.