ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕರ ಸೂಚನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಡಬ ಆಹಾರ ನಿರೀಕ್ಷಕ ಎಂ.ಎಲ್. ಶಂಕರ್, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಆಹಾರ ಇಲಾಖೆಯ ಗೋಡಾನ್ ವ್ಯವಸ್ಥಾಪಕ ಚಂದ್ರಹಾಸ ಮಣಿಯಾಣಿ ಭೇಟಿ ನೀಡಿ ಅಕ್ಕಿಯೊಂದಿಗೆ ಬೆರೆತಿದ್ದ ಕಲ್ಲು, ಪಂಚಕಜ್ಜಯ, ಹುಣಿಸೆ ಬೀಜಗಳನ್ನು ಪರಿಶೀಲಿಸಿದ್ದಾರೆ. ಈ ಬಗ್ಗೆ ಆಹಾರ ಇಲಾಖೆಯ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು.
ಸಮಸ್ಯೆ ಇರುವ ಅಕ್ಕಿ ಚೀಲಗಳನ್ನು ಬದಲಿಸಿ ಬೇರೆ ನೀಡಲಾಗುವುದು ಎಂದು ತಿಳಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಲು ವರದಿ ನೀಡಲಾಗುವುದು ಎಂದು ಎಂದಿರುವ ತಂಡ ಅಕ್ಕಿಯ ಸ್ಯಾಂಪಲ್ಗಳನ್ನು ಪಡೆದುಕೊಂಡು ಹೋಗಿದ್ದಾರೆ.