ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಸ್ತ್ರ ಚಿಕಿತ್ಸೆಗೂ ಮುನ್ನ ರೋಗಿಗೆ ರಕ್ತದ ಅವಶ್ಯಕತೆ ಇದ್ದು, ವೈದ್ಯರೇ ರೋಗಿಗೆ ರಕ್ತದಾನ ಮಾಡಿದ್ದಾರೆ.
ಡೆಹ್ರಾಡೂನ್ನ ಡೂನ್ಪಿಜಿ ವೈದ್ಯಕೀಯ ಕಾಲೇಜಿನ ಮೂಳೆ ಚಿಕಿತ್ಸಕ ವೈದ್ಯರಾದ ಡಾ. ಶಶಾಂಕ್ ಸಿಂಗ್ ತಮ್ಮ ಪೇಷೆಂಟ್ಗೆ ರಕ್ತದಾನ ಮಾಡಿದ್ದಾರೆ.
ಗುಂಡಿಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎದೆ, ಎಡಗೈ ಹಾಗೂ ತೊಡೆಯ ಮೂಳೆ ಮುರಿದು ರೋಗಿ ನೋವಿನಿಂದ ನರಳುತ್ತಿದ್ದರು.
ವ್ಯಕ್ತಿಯನ್ನು ಮೂರು ದಿನ ಐಸಿಯುನಲ್ಲಿ ಇರಿಸಲಾಗಿತ್ತು. ತದನಂತರ ಮೊದಲು ತೊಡೆಯ ಮೂಳೆ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಲಾಗಿತ್ತು. ರಕ್ತದ ಕೊರತೆಯಿಂದ ಆಪರೇಷನ್ ಮಾಡಲು ಸಾಧ್ಯವಾಗಿಲ್ಲ. ರೋಗಿಯ ಮಗಳು ರಕ್ತ ನೀಡಲು ಮುಂದಾದಳು. ಆದರೆ ಆಕೆಗೆ ಕೆಲವು ಆರೋಗ್ಯ ಸಮಸ್ಯೆಗಳಿದ್ದು, ರಕ್ತ ನೀಡಲು ಆಗಲಿಲ್ಲ. ಈ ವೇಳೆ ಆಪರೇಷನ್ ಮಾಡಬೇಕಿದ್ದ ವೈದ್ಯರೇ ಮುಂದೆ ಬಂದು ರಕ್ತದಾನ ಮಾಡಿ, ಆಪರೇಷನ್ ಮಾಡಿ ರೋಗಿ ಜೀವ ಉಳಿಸಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ತವ್ಯನಿಷ್ಠೆ ಜೊತೆಗೆ ಮಾನವೀಯತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.