ಹೊಸದಿಗಂತ ಡಿಜಿಟಲ್ ಡೆಸ್ಕ್
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ತೆರಳಿದ್ದ ಉಡುಪಿಯ ಬೈಂದೂರಿನ ಶಿರೂರು ಗ್ರಾಮದ ಮುಸ್ತಾಕ್ ಮಾಲಿಕತ್ವದ ‘ಬಿಬಿ ಆಮೀನಾ’ ಎಂಬ ಹೆಸರಿನ ಬೋಟ್ನ ಒಳಗೆ ನೀರು ನುಗ್ಗಿ ಐವರು ಮೀನುಗಾರರನ್ನು ಹತ್ತಿರದಲ್ಲಿದ್ದ ಸೈಪಾ ಎಂಬ ಹೆಸರಿನ ಬೋಟ್ನವರು ಹಾಗು ಗಂಗೊಳ್ಳಿ ಕರಾವಳಿ ಕಾವಲು ಪಡೆಯವರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.
ಮುಸ್ತಾಕ್ (52), ರೋಜಿ ಅಬುಬಕ್ಕರ್ (55), ತರಿಸಲ್ಲ ಅಶ್ರಫ್ (37), ಶಬೀರ್ (50) ಬೊಂಬಾ ಮೊಹಮ್ಮದ್ (47) ರಕ್ಷಿಸಲ್ಪಟ್ಟ ಮೀನುಗಾರರು
ಘಟನೆ ವಿವರ
ಬಿಬಿ ಆಮೀನಾ ಎಂಬ ಹೆಸರಿನ ಬೋಟ್ ಶಿರೂರು ಗ್ರಾಮದ ಆಳವೆಗದ್ದ ಸಮುದ್ರ ತೀರ ಪ್ರದೇಶದಿಂದ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದು, ಸುಮಾರು 16.00 ಗಂಟೆ ಸಮಯಕ್ಕೆ ಶಿರೂರು ನೇರ 18 ನಾಟಕಲ್ ಮೈಲ್ ದೂರದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಹವಾಮಾನ ವೈಪರೀತ್ಯದಿಂದ ಸಮುದ್ರ ಪ್ರಕುಬ್ಧಗೊಂಡು ಬೋಟ್ನ ಒಳಗೆ ನೀರು ನುಗ್ಗಿ 5 ಜನ ಮೀನುಗಾರರು ಹಾಗೂ ಬೋಟ್ ಅಪಾಯದಲ್ಲಿ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಹತ್ತಿರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬುದ್ರು ಇಪಾನ್ ಮಾಲಿಕತ್ವದ ಸೈಪಾ ಹೆಸರಿನ ಬೋಟ್ನವರು ಅಪಾಯದಲ್ಲಿರುವ ಬೋಟ್ನ ಹತ್ತಿರ ತೆರಳಿ ಬೋಟ್ ಒಳಗೆ ಇರುವ 5 ಜನ ಮೀನುಗಾರರನ್ನು ರಕ್ಷಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.