ಕಾಂತಾರದ ‘ಕರ್ಮದ ಕಲ್ಲನು’ ಹಾಡಿದ ಬಾಲಿವುಡ್ ನಟಿ ತೇಜಸ್ವಿ ಪ್ರಕಾಶ್: ತಲೆದೂಗಿದ ಅಭಿಮಾನಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಿಂದಿ ಬಿಗ್ ಬಾಸ್ ಸೀಸನ್ 15 ವಿನ್ನರ್ (Bigg Boss season 15 winner) ಆಗಿರುವ ನಾಗಿಣಿ ಸೀರಿಯಲ್ ಮೂಲಕ ಚಿರಪರಿಚಿತ ನಟಿ ತೇಜಸ್ವಿ ಪ್ರಕಾಶ್ ಹಿಂದಿ ಕಿರುತೆರೆ ಮತ್ತು ಫ್ಯಾಷನ್ ಜಗತ್ತಿನಲ್ಲಿ ಬ್ಯುಸಿಯಾಗಿದ್ದಾರೆ.

ಪ್ರತಿದಿನವೂ ಅವರುತಮ್ಮ ಮಾತು , ಸ್ಟೈಲ್ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ಸೀರಿಯಲ್, ಕತ್ರೋಂಕಿ ಖಿಲಾಡಿ, ಮತ್ತಿತರ ರಿಯಾಲಿಟಿ ಶೋ ಮೂಲಕ ಹೆಸರು ಪಡೆದುಕೊಂಡಿದ್ದ ತೇಜಸ್ವಿ ಪ್ರಕಾಶ್ ಗೆ ಹಿಂದಿ ಬಿಗ್ ಬಾಸ್ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು.

ಕೇವಲ ನಟನೆ ಅಲ್ಲದೆ ತೇಜಸ್ವಿ ಪ್ರಕಾಶ್ ಹಲವಾರು ಜನಪ್ರಿಯ ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು ಬಯಸುವ ಇವರು, ಸೋಶಿಯಲ್ ಮೀಡಿಯಾದಲ್ಲಿ, (social media) ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಾರೆ.

ಸದ್ಯ ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕನ್ನಡದ ಜನಪ್ರಿಯ ಚಿತ್ರ ‘ಕಾಂತಾರ’ದ ಕರ್ಮದ ಕಲ್ಲನು ಹಾಡನ್ನು ಕನ್ನಡದಲ್ಲೇ ಹಾಡುವ ಮೂಲಕ ಅಭಿಮಾನಿಗಳಿಗೆ ತನ್ನೊಳಗಿನ ಗಾಯಕಿಯನ್ನು ಸಹ ಅನಾವರಣ ಮಾಡಿದ್ದಾರೆ. ಅವರ ಹಾಡಿಗೆ ಕನ್ನಡಿಗರು ಹಾಡಿಗೆ ತಲೆದೂಗಿದ್ದಾರೆ.

ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ
ಗುಡಿಯಲಿ ದೈವವು ಕಾಯದು
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ
ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ..’
ಎನ್ನುವ ಹಾಡುಗಳ ಸಾಲುಗಳನ್ನು ಅಷ್ಟೇ ಮುದ್ದಾಗಿ, ಅಕ್ಷರವೂ ತಪ್ಪದಂತೆ, ಅದೇ ರಾಗದಲ್ಲಿ ಹಾಡಿದ ತೇಜಸ್ವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ .
ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಇಂಗ್ಲಿಷ್ ನಲ್ಲಿ ಕ್ಯಾಪ್ಶನ್ ಹಾಕಿ“The stone of karma is a man who stumbles…The finger wound will not disappear…God will not wait…The darkness was filled with a lamp…Is it a flame that burns the city?” ಎಂದು ಬರೆದುಕೊಂಡಿದ್ದಾರೆ.

https://www.instagram.com/p/CpKoeYgKWa3/?hl=en

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!