ಖರ್ಗೆ ಕಂಡು ನಮ್ರತೆಯಿಂದ ಕೈ ಮುಗಿದ ಬೊಮ್ಮಾಯಿ: ಸರಳತೆಯನ್ನು ಕೊಂಡಾಡಿದ ಅಸ್ಸಾಂ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಮಾಧ್ಯಮದ ಸಂವಾದ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮುಖಾಮುಖಿಯಾಗಿದ್ದಾರೆ.

ಬೊಮ್ಮಾಯಿ ಎದುರು ಖರ್ಗೆ ಅವರು ಬಂದಾಗ ಮುಗುಳ್ನಗುತ್ತಾ ನಮಸ್ಕರಿಸುತ್ತಿರುವ ಫೋಟೊ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಖರ್ಗೆಯವರಿಗೆ ಬೊಮ್ಮಾಯಿ ನಮ್ರತೆಯಿಂದ ಕೈ ಮುಗಿದಿದ್ದಾರೆ .
ಇದೀಗ ಈ ಫೋಟೋ ವನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದೂ, ಬೊಮ್ಮಾಯಿ ಅವರ ಸರಳತೆಯನ್ನು ಮೆಚ್ಚಿದ್ದಾರೆ.

“ದರ್ಪ vs ಸರಳತೆ. ಕರ್ನಾಟಕದ ಮುಖ್ಯಮಂತ್ರಿಯ ಉನ್ನತ ಹುದ್ದೆಯಲ್ಲಿದ್ದರೂ ಅತ್ಯಂತ ನಮ್ರತೆ ಮತ್ತು ಸರಳತೆಯನ್ನು ಪ್ರದರ್ಶಿಸಿದ್ದಕ್ಕಾಗಿ ಬೊಮ್ಮಾಯಿ ಜೀ ಅವರಿಗೆ ಅಭಿನಂದನೆಗಳು’ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಒಬ್ಬರು ಬಿಜೆಪಿ ಮುಖ್ಯಮಂತ್ರಿ ಮತ್ತು ಇನ್ನೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಈ ಫೋಟೊಗೆ ಶೀರ್ಷಿಕೆ ಕೊಡಿ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!