ಹೊಸದಿಗಂತ ವರದಿ, ಕಲಬುರಗಿ:
ಮಹಾರಾಷ್ಟ್ರ ರಾಜ್ಯದಲ್ಲಿ ಕನಾ೯ಟಕ ಬಸ್,ಗೆ ಕಪ್ಪು ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ,ಇದರ ಬೆನ್ನಲ್ಲೇ ಮಹಾ ಬಸ್,ಗೆ ಕಪ್ಪು ಮಸಿ ಬಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ.ಇ.ಎಸ್.ಪುಂಡಾಟಿಕೆಗೆ ಕನ್ನಡಪರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿ,ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂಗಿ೯ ಗ್ರಾಮದಲ್ಲಿ ಮಹಾ ಬಸ್,ಗೆ ಮಸಿ ಬಳೆದಿದ್ದಾರೆ.
ಕನಾ೯ಟಕ ನವನಿಮಾ೯ಣ ಸೇನೆಯ ವತಿಯಿಂದ ಕಪ್ಪು ಮಸಿ ಬಳೆಯಲಾಗಿದೆ.ಅಕ್ಕಲಕೋಟ ನಿಂದ ಅಫಜಲಪುರ ಕಡೆಗೆ ತೆರಳುತ್ತಿದ್ದ ಮಹಾರಾಷ್ಟ್ರ ಬಸ್,ಗೆ ಕಪ್ಪು ಮಸಿ ಬಳೆಯಲಾಗಿದೆ.
ಬಸ್,ಗೆ ಕಪ್ಪು ಮಸಿ ಬಳೆದು,ನಮ್ಮ ರಾಜ್ಯದ ಒಂದಿಂಚು ಜಾಗವೂ ಬಿಡುವುದಿಲ್ಲ ಎಂದು ಬಸ್,ನ ಗಾಜಿನ ಮೇಲೆ ಪೋಸ್ಟರ್ ಅಂಟಿಸಿದ್ದಾರೆ.