ಸಾಲಭಾಧೆ: ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ಹೊಸದಿಗಂತ ವರದಿ, ಕೊಪ್ಪಳ:
ಸಾಲ ತೀರಿಸಿದ್ದ ರೈತನ ಬೆಳೆಗೆ ಮರು ಸಾಲ ಸಿಗದ ಕಾರಣಕ್ಕೆ ಬೇಸತ್ತ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿರುವ ಘಟನೆ ನಗರದ ಎಪಿಎಂಸಿ ಆವರಣದಲ್ಲಿರುವ ಪಾರಸ್ ರಸಗೊಬ್ಬರದ ಅಂಗಡಿಯಲ್ಲಿ ಜರುಗಿದೆ.
ಹನಕುಂಟಿ ಗ್ರಾಮದ ರವಿ ಲಕ್ಕುಂಡು (38) ಮೃತ ರೈತ.
ಮೆಕ್ಕೆಜೋಳ ಬೆಳೆ ಬೆಳೆದಿದ್ದ ರೈತನು ರಸಗೊಬ್ಬರ ಅಂಗಡಿ ಮಾಲೀಕರಿಗೆ ಮಾರಾಟ ಮಾಡಿದ್ದು, ಒಂದು ಲಕ್ಷ ರೂ. ಸಾಲ ತೀರಿದೆ. ಮರು ಸಾಲ ನೀಡಿಲ್ಲ. ಇದರಿಂದ ಬೇಸತ್ತು ರೈತ ಮೃತಪಟ್ಟಿದ್ದಾನೆ.
ಎರಡು ದಿನದ ಹಿಂದೆ ಕ್ರಿಮಿನಾಶಕ ಸೇವನೆ ಮಾಡಿದ್ದು, ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸಾವು- ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ರೈತ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ. ಮೃತರಿಗೆ ನಾಲ್ಕು ಇಬ್ಬರು ಹೆಣ್ಣು , ಇಬ್ಬರು ಗಂಡು ಮಕ್ಕಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!