ನವರಾತ್ರಿ ದಿನ 6: ಶ್ರೀ ರಾಮ, ಶ್ರೀ ಕೃಷ್ಣ ಇಬ್ಬರೂ ಕಾತ್ಯಾಯನಿ ದೇವಿಯ ಆರಾಧಕರು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿಯ ಆರನೇ ದಿನ ದೇವಿ ಕಾತ್ಯಾಯನಿಯನ್ನು ಪೂಜಿಸಲಾಗುತ್ತದೆ. ಈ ದೇವಿ ಶಾಂತ ಮೂರ್ತಿ ಅಲ್ಲ, ಈಕೆ ದುರ್ಗಾ ದೇವಿಯ ಉಗ್ರ ಸ್ವರೂಪ. ಈಕೆ ತನ್ನ ಕೈಯಲ್ಲಿ ಕಮಲ,ಖಡ್ಗ ಮತ್ತು ಶಿವನ ತ್ರಿಶೂಲ ಹಿಡಿದಿದ್ದಾಳೆ. ಸಿಂಹದ ಮೇಲೆ ಈಕೆ ಸವಾರಿ ಮಾಡುತ್ತಾಳೆ. ಮಹಿಷಾಸುರಮರ್ದಿನಿಯ ಷಷ್ಠಿಯಂದು, ಅಂದರೆ ನವರಾತ್ರಿಯ ಆರನೇ ದಿನ ಈ ದೇವಿಯನ್ನು ಪೂಜಿಸಲಾಗುತ್ತದೆ.

ದೇವಿಯನ್ನು ಬ್ರಿಜ್ ಮಂಡಲದ ಅಧಿದೇವತೆ, ಯುದ್ಧದ ದೇವತೆ ಎಂದು ಕರೆಯಲಾಗುತ್ತದೆ. ಕಾತ್ಯಾಯನಿ ದೇವಿ ಚಿನ್ನದ ಬಣ್ಣದಿಂದ ಹೊಳೆಯುತ್ತಿದ್ದು, ಹಳದಿ ಬಣ್ಣ ದೇವಿಗೆ ಇಷ್ಟವಾದ್ದು. ಹೆಣ್ಣು ಮಕ್ಕಳು ಶುದ್ಧ ಮನಸ್ಸಿನಿಂದ ಪೂಜಿಸಿದರೆ ವಿವಾಹ ಶೀಘ್ರ ಪೂರ್ಣವಾಗುತ್ತದೆ ಮತ್ತು ಇಷ್ಟಪಟ್ಟ ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆ.

ಹಿನ್ನೆಲೆ?
ಶ್ರೀ ರಾಮ ಹಾಗೂ ಶ್ರೀ ಕೃಷ್ಣ ಇಬ್ಬರೂ ಕಾತ್ಯಾಯನಿ ದೇವಿಯನ್ನು ಪೂಜಿಸುತ್ತಿದ್ದರು ಎನ್ನಲಾಗಿದೆ. ಶ್ರೀ ಕೃಷ್ಣನಿಗಾಗಿ ಬ್ರಜ್‌ನ ಗೋಪಿಗಳು ಈ ದೇವಿಯನ್ನು ಪೂಜಿಸಿದ್ದರು ಎನ್ನಲಾಗಿದೆ.

ಪೂಜಾ ವಿಧಾನ
ಸ್ನಾನದ ನಂತರ ಶುಭ್ರ ಉಡುಪು ಧರಿಸಿ
ತಾಯಿಯ ವಿಗ್ರಹವನ್ನು ಶುದ್ಧ ನೀರಿನಿಂದ ಅಭಿಷೇಕ ಮಾಡಿ
ಹಳದಿ ಬಟ್ಟೆಗಳನ್ನು ಅರ್ಪಿಸಿ
ಕೆಂಪು ಕುಂಕುಮ, ಕೆಂಪು ದಾಸವಾಳ ಅರ್ಪಿಸಿ
ಐದು ವಿವಿಧ ಫಲ, ಜೇನುತುಪ್ಪ ಅರ್ಪಿಸಿ
ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!