July 20, 2026
Monday, July 20, 2026
spot_img

ಈಜು ಕೊಳದಲ್ಲಿ ಮುಳುಗಿ ಬಾಲಕ ಸಾ*ವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಹೊಸದಿಗಂತ ವರದಿ ತುಮಕೂರು:

ಈಜು ಕೊಳದಲ್ಲಿ ಈಜಲು ತೆರಳಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ವೀರಮ್ಮನಹಳ್ಳಿ ಗೇಟ್ ಬಳಿ ಶನಿವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಪಟ್ಟಣದ ಕಣ್ಮನ್ಚರ್ಲು ಬಡಾವಣೆಯ ತಾಹಿರ್(13) ಎಂದು ಗುರುತಿಸಲಾಗಿದೆ.

ಬೇಸಿಗೆ ಪ್ರಯುಕ್ತ ವೀರಮ್ಮನಹಳ್ಳಿ ಗೇಟ್ ಬಳಿ ಪ್ರಾರಂಭಿಸಿರುವ ಹಣ ಪಾವತಿಸಿ ಉಪಯೋಗಿಸುವ ಈಜು ಕೊಳದಲ್ಲಿ ಈಜಾಡಲು ತೆರಳಿದ್ದ ವೇಳೆ ಘಟನೆ ಸಂಭವಿಸಿದ್ದಾಗಿ ತಿಳಿದು ಬಂದಿದೆ. ಮೃತ ದೇಹವನ್ನು ಮರಣೋತ್ತರ ವರದಿಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !