ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾಗೆ ಬೈಕಾಟ್ ಬಿಸಿ ಮುಟ್ಟಿದ್ದು, ಇದಾದ ಬಳಿಕ ಆಮೀರ್ ಖಾನ್ ಅವರು ಭಾರತದ ಪರವಾಗಿ ಇದ್ದಾರೆ, ಅವರನ್ನು ಬೆಂಬಲಿಸಿ ಎಂದು ನಟ ಅಕ್ಷಯ್ ಕುಮಾರ್ ಅವರೂ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸಿದ್ದರು. ಹೀಗಾಗಿ ಚಿತ್ರ ರಕ್ಷಾಬಂಧನ್ ಕೂಡ ಇಂದು ಬಿಡುಗಡೆಯಾಗಿದ್ದು, ಅದಕ್ಕೇನು ಬೈಕಾಟ್ ಮಾಡಿರಲಿಲ್ಲ. ಆದರೆ ಈ ಚಿತ್ರ ಕೂಡ ಮೊದಲ ದಿನ ಭಾರಿ ನಿರಾಸೆಯ ಪ್ರದರ್ಶನ ಕಂಡಿದೆ.
ಭಾರತದಲ್ಲಿ ಅಸಹಿಷ್ಣತೆ ಇದೆ ಎನ್ನುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಆಮೀರ್ ಖಾನ್ , ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎನ್ನುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇದರಿಂದ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಕಾಣಲು ಅನೇಕರು ಹಿಂದೇಟು ಹಾಕಿದ್ದರು.
ಈ ವೇಳೆ ಆಮೀರ್ ಖಾನ್ ನಂತರ ಸಾಮಾಜಿಕ ಮಾಧ್ಯಮಗಳ ಮುಂದೆ ಬಂದು, ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನನಗೆ ಭಾರತ ಎಂದರೆ ತುಂಬಾ ಅಭಿಮಾನವಿದೆ, ದಯವಿಟ್ಟು ನನ್ನ ಚಿತ್ರಗಳಿಗೆ ಬೈಕಾಟ್ ಹಾಕಬೇಡಿ ಎಂದು ಗೋಗರೆದಿದ್ದರು. ಆದರೆ ಇವರ ಈ ಮಾತುಗಳು ಭಾರತೀಯರ ಮನಮುಟ್ಟುವಲ್ಲಿ ವಿಫಲವಾಗಿದೆ.
ಇದಾದ ನಂತರ ನಟ ಅಕ್ಷಯ್ ಕುಮಾರ್ ಅವರೂ ಸಾಮಾಜಿಕ ಜಾಲತಾಣದಲ್ಲಿ ಅಮಿರ್ ಪರ ನಿಂತ ಪರಿಣಾಮ , ಅವರ ಚಿತ್ರ ರಕ್ಷಾಬಂಧನ್ ಕೂಡ ಇಂದು ಬಿಡುಗಡೆಯಾಗಿದ್ದು, ಅದಕ್ಕೇನು ಬೈಕಾಟ್ ಮಾಡಿರಲಿಲ್ಲ. ಆದರೆ ಈ ಚಿತ್ರ ಕೂಡ ಮೊದಲ ದಿನ ಭಾರಿ ನಿರಾಸೆಯ ಪ್ರದರ್ಶನ ಕಂಡಿದೆ. ಈ ಚಿತ್ರದ ಮುಂಗಡ ಬುಕಿಂಗ್ ಕೂಡ ಲಾಲ್ ಸಿಂಗ್ ಛಡ್ಡಾದಂತೆಯೇ ಆಗಿದ್ದು, ನಿರ್ಮಾಪಕರಿಗೆ ತಲೆಬಿಸಿಯಾಗಿರುವುದಾಗಿ ವರದಿಯಾಗಿದೆ.
ಭಾರತದಲ್ಲಿ ನೆಲೆಸಿ, ಇಲ್ಲಿಯ ಅನ್ನವನ್ನುಂಡು ಭಾರತವನ್ನೇ ಧಿಕ್ಕರಿಸುವವರಿಗೆ ಹಾಗೂ ಅಂಥವರಿಗೆ ಸಹಕರಿಸುವವರಿಗೆ ನಿಜವಾದ ಭಾರತೀಯರು ಇದೇ ರೀತಿ ಪಾಠ ಕಲಿಸುವುದು ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಪುನಃ ಹರಿದಾಡುತ್ತಿದೆ.