ಆಮೀರ್​ಗೆ ಬೈಕಾಟ್​ ಬಿಸಿ: ಬೆಂಬಲಿಸಿದ ಅಕ್ಷಯ್​ಗೂ ತಪ್ಪದ ಸಂಕಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್​ ನಟ ಆಮೀರ್​ ಖಾನ್​ ಅಭಿನಯದ ಲಾಲ್​ ಸಿಂಗ್​ ಛಡ್ಡಾ ಸಿನಿಮಾಗೆ ಬೈಕಾಟ್​ ಬಿಸಿ ಮುಟ್ಟಿದ್ದು, ಇದಾದ ಬಳಿಕ ಆಮೀರ್​ ಖಾನ್​ ಅವರು ಭಾರತದ ಪರವಾಗಿ ಇದ್ದಾರೆ, ಅವರನ್ನು ಬೆಂಬಲಿಸಿ ಎಂದು ನಟ ಅಕ್ಷಯ್​ ಕುಮಾರ್​ ಅವರೂ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸಿದ್ದರು. ಹೀಗಾಗಿ ಚಿತ್ರ ರಕ್ಷಾಬಂಧನ್​ ಕೂಡ ಇಂದು ಬಿಡುಗಡೆಯಾಗಿದ್ದು, ಅದಕ್ಕೇನು ಬೈಕಾಟ್​ ಮಾಡಿರಲಿಲ್ಲ. ಆದರೆ ಈ ಚಿತ್ರ ಕೂಡ ಮೊದಲ ದಿನ ಭಾರಿ ನಿರಾಸೆಯ ಪ್ರದರ್ಶನ ಕಂಡಿದೆ.

ಭಾರತದಲ್ಲಿ ಅಸಹಿಷ್ಣತೆ ಇದೆ ಎನ್ನುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಆಮೀರ್​ ಖಾನ್​ , ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎನ್ನುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇದರಿಂದ ಖಾನ್​ ಅಭಿನಯದ ಲಾಲ್​ ಸಿಂಗ್​ ಛಡ್ಡಾ ಸಿನಿಮಾ ಕಾಣಲು ಅನೇಕರು ಹಿಂದೇಟು ಹಾಕಿದ್ದರು.
ಈ ವೇಳೆ ಆಮೀರ್​ ಖಾನ್​ ನಂತರ ಸಾಮಾಜಿಕ ಮಾಧ್ಯಮಗಳ ಮುಂದೆ ಬಂದು, ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನನಗೆ ಭಾರತ ಎಂದರೆ ತುಂಬಾ ಅಭಿಮಾನವಿದೆ, ದಯವಿಟ್ಟು ನನ್ನ ಚಿತ್ರಗಳಿಗೆ ಬೈಕಾಟ್​ ಹಾಕಬೇಡಿ ಎಂದು ಗೋಗರೆದಿದ್ದರು. ಆದರೆ ಇವರ ಈ ಮಾತುಗಳು ಭಾರತೀಯರ ಮನಮುಟ್ಟುವಲ್ಲಿ ವಿಫಲವಾಗಿದೆ.

ಇದಾದ ನಂತರ ನಟ ಅಕ್ಷಯ್​ ಕುಮಾರ್​ ಅವರೂ ಸಾಮಾಜಿಕ ಜಾಲತಾಣದಲ್ಲಿ ಅಮಿರ್ ಪರ ನಿಂತ ಪರಿಣಾಮ , ಅವರ ಚಿತ್ರ ರಕ್ಷಾಬಂಧನ್​ ಕೂಡ ಇಂದು ಬಿಡುಗಡೆಯಾಗಿದ್ದು, ಅದಕ್ಕೇನು ಬೈಕಾಟ್​ ಮಾಡಿರಲಿಲ್ಲ. ಆದರೆ ಈ ಚಿತ್ರ ಕೂಡ ಮೊದಲ ದಿನ ಭಾರಿ ನಿರಾಸೆಯ ಪ್ರದರ್ಶನ ಕಂಡಿದೆ. ಈ ಚಿತ್ರದ ಮುಂಗಡ ಬುಕಿಂಗ್​ ಕೂಡ ಲಾಲ್​ ಸಿಂಗ್​ ಛಡ್ಡಾದಂತೆಯೇ ಆಗಿದ್ದು, ನಿರ್ಮಾಪಕರಿಗೆ ತಲೆಬಿಸಿಯಾಗಿರುವುದಾಗಿ ವರದಿಯಾಗಿದೆ.

ಭಾರತದಲ್ಲಿ ನೆಲೆಸಿ, ಇಲ್ಲಿಯ ಅನ್ನವನ್ನುಂಡು ಭಾರತವನ್ನೇ ಧಿಕ್ಕರಿಸುವವರಿಗೆ ಹಾಗೂ ಅಂಥವರಿಗೆ ಸಹಕರಿಸುವವರಿಗೆ ನಿಜವಾದ ಭಾರತೀಯರು ಇದೇ ರೀತಿ ಪಾಠ ಕಲಿಸುವುದು ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಪುನಃ ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!