ಹೊಸದಿಗಂತ ವರದಿ,ಮಡಿಕೇರಿ:
ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಲ್ಲಿನ ಸರ್ವೆ ಇಲಾಖೆಯ ಅಧಿಕಾರಿಯೊಬ್ಬರನ್ನು ಬಂಧಿಸಿದ್ದಾರೆ.
ಮಡಿಕೇರಿಯ ಸರ್ವೆ ಇಲಾಖೆ ಅಧಿಕಾರಿ ಸಿ. ಮಾದಪ್ಪ ಎಂಬವರೇ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಭೂ ಮಾಪನಕ್ಕೆ ಸಂಬಂಧಿಸಿದಂತೆ ಕೆ.ಎಸ್.ಮಾದಪ್ಪ ಎಂಬವರಿಂದ ಎರಡು ಸಾವಿರ ರೂ.ನಗದು ಹಾಗೂ ಒಂದು ಮದ್ಯದ ಬಾಟಲಿ ಪಡೆಯುವ ಸಂದರ್ಭ ಲೋಕಾಯುಕ್ತ ಎಸ್ಪಿ ಹಾಗೂ ಲೋಕಾಯುಕ್ತ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ
ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಅಧಿಕಾರಿ ಹಿಂದೆಯೂ 15 ಸಾವಿರ ರೂ. ಲಂಚ ಪಡೆದಿರುವುದಾಗಿ ಹೇಳಲಾಗಿದೆ.