ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಓ

ಹೊಸ ದಿಗಂತ ವರದಿ, ಬಾಗಲಕೋಟೆ: 

ಎನ್ ಎ ಪ್ಲಾಟ್ ನ ಉತಾರೆ ನೀಡಲು 25 ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ  ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ  ಹಿರೇಶಿಂಗಣಗುತ್ತಿ ಗ್ರಾಮದಲ್ಲಿ ನಡೆದಿದೆ.

ಎಸಿಬಿ ಬಲೆಗೆ ಬಿದ್ದ ಪಿಡಿಓ ಶಿವಪ್ಪ ಬಿರಾದಾರ, ಹುನಗುಂದ ತಹಶೀಲ್ದಾರ ಕಚೇರಿ ಮುಂಭಾಗ ಖಾಸಗಿ ಕಟ್ಟಡದ ಅಂಗಡಿಯಲ್ಲಿದ್ದಾಗ  ಎಸಿಬಿ ದಾಳಿ ಅಂಗಡಿ ಮೇಲೆ ದಾಳಿ ಮಾಡಿದೆ.

ಚಿಕ್ಕ ಆದಾಪೂರ ಗ್ರಾಮದ ಬಸವರಾಜ್ ಪಾಟೀಲ್ ರ ದೂರಿನ ಮೇರೆಗೆ ಎಸಿಬಿ ಡಿವೈಎಸ್ ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಸಿಪಿಐ ವಿಜಯಮಹಾಂತೇಶ ಮಠಪತಿ, ಸಮೀರ ಮುಲ್ಲಾ  ದಾಳಿ ಮಾಡಿದ್ದಾರೆ. ಎಸಿಬಿ ದಾಳಿಗೆಖಾಸಗಿ ಕಂಪ್ಯೂಟರ್ ಆಪರೇಟರ್ ತಿಪ್ಪಣ್ಣ ಸಹ ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!