ಹೊಸ ದಿಗಂತ ಡಿಜಿಟಲ್ ವಿಶ್ಲೇಷಣೆ
ಕರ್ನಾಟಕದ ಹತ್ತನೇ ತರಗತಿ ಪಠ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಕೇಶವ ಬಲಿರಾಂ ಹೆಡಗೆವಾರ್ ಅವರ ಬರಹವೊಂದನ್ನು ಪಾಠವಾಗಿ ಅಳವಡಿಸಿರುವುದರ ವಿರುದ್ಧ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವಲಯದ ಬುದ್ಧಿಜೀವಿಗಳು ಆಕ್ಷೇಪ ಎತ್ತಿದ್ದಾರೆ. ಈ ಬಗ್ಗೆ ಪರ-ವಿರೋಧದ ದೀರ್ಘ ಲೇಖನಗಳೆಲ್ಲ ಪ್ರಕಟವಾಗಿವೆ. ಆದರೆ ಇಲ್ಲಿ ನಾವು ಆಕ್ಷೇಪ ಹಾಗೂ ಅದರ ಎದುರಿನ ತಥ್ಯ ಇವಷ್ಟನ್ನೇ ಸಾದರಪಡಿಸುತ್ತಿದ್ದೇವೆ. ಇದು ಒಟ್ಟಾರೆ ಗದ್ದಲದ ನಡುವೆ ನಿಜಕ್ಕೂ ತಿಳಿಯಬೇಕಾದ ವಿಷಯಗಳನ್ನು ನಿಮಗೆ ಮುಟ್ಟಿಸುತ್ತದೆ.