ತಂಗಿ ತಿಥಿ ಮುಗಿಸಿ ಬಾರದ ಲೋಕಕ್ಕೆ ಹೊರಟ ಅಣ್ಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಂಗಿ ಸಾವಿನಿಂದ ಮನನೊಂದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುದುರುಗುಂಡಿ ಗ್ರಾಮದ ಬಳಿ ನಡೆದಿದೆ.

ಅಣ್ಣ ವೇಣುಗೋಪಾಲ್ (58) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಒಂದು ವರ್ಷದ ಹಿಂದೆ ಹೃದಯಾಘತದಿಂದ ತಂಗಿ ಗಾಯಿತ್ರಿ ಸಾವನ್ನಪ್ಪಿದ್ದರು. ಮೂರು ದಿನದ ಹಿಂದೆ ಗಾಯಿತ್ರಿಯವರ ಮೊದಲ ವರ್ಷದ ತಿಥಿ ಮಾಡಿದ್ದರು. ತಿಥಿ ಕಾರ್ಯದ ದಿನ ತಂಗಿಯ ಸಮಾಧಿ ಬಳಿ ಕುಳಿತು ಅಳುತ್ತಿದ್ದ ಅಣ್ಣ ವೈದ್ಯ ವೇಣುಗೋಪಾಲ್, ತಂಗಿ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ಸಂಜೆ ಕುದುರುಗುಂಡಿಗೆ ಹೋಗಿ ಬರುವುದಾಗಿ ಹೇಳಿದ್ದ ವೇಣುಗೋಪಾಲ್, ಸಮೀಪದ ಗದ್ದೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!