ತೆಲಂಗಾಣ ವಿಧಾನಸಭಾ ಚುನಾವಣೆ: ರೋಡ್ ಶೋನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಎಂಎಲ್‌ಸಿ ಕವಿತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣ ವಿಧಾನಸಬಾ ಚುನಾವಣೆ ಹಿನ್ನೆಲೆ ಆಡಳಿತ ಪಕ್ಷ ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಜಗಿತ್ಯಾಲ ರಾಯ್ಕಲ್ ಮಂಡಲದ ಇಟಿಕ್ಯಾಲ ಗ್ರಾಮದಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದ ಎಂಎಲ್ ಸಿ ಕವಿತಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ರೋಡ್ ಶೋನಲ್ಲಿ ಸಹ ಮುಖಂಡರು ಮಾತನಾಡುತ್ತಿದ್ದಾಗ ಹಿಂದೆ ಸರಿದ ಕವಿತಾ ಕುಸಿದು ಬಿದ್ದರು.

ಕೂಡಲೇ ಸಹ ನಾಯಕರು ನೀರು, ತಂಪಾದ ಪಾನೀಯಗಳನ್ನು ನೀಡಿ ಉಪಚರಿಸಿದ ಬಳಿಕ ಚೇತರಿಸಿಕೊಂಡ ಕವಿತಾ, ಮತ್ತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ವಿಶ್ರಾಂತಿಯಿಲ್ಲದೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಅಸ್ವಸ್ಥಗೊಂಡಿರುವಂತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!