ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ನಮ್ಮ ಬೆಂಬಲ ಇದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಪಕ್ಷಗಳು ತನ್ನನ್ನು ಸಂಪರ್ಕಿಸಿಲ್ಲ. ಅವುಗಳು ತಮ್ಮ ಪಕ್ಷದ ವಿರುದ್ಧ ಜಾತಿವಾದಿ ಮನಸ್ಥಿತಿ ಮುಂದುವರೆಸುತ್ತಿರುವುದರಿಂದ, ಬಿಎಸ್ಪಿ ರಾಷ್ಟ್ರಪತಿ ಚುನಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಬಹುಜನ ಸಮಾಜ ಪಕ್ಷದ ನಿರ್ಧಾರ, ಬುಡಕಟ್ಟು ಸಮುದಾಯವನ್ನು ನಮ್ಮ ಚಳುವಳಿಯ ಪ್ರಮುಖ ಭಾಗವೆಂದು ಗುರುತಿಸುತ್ತಿರುವುದಾಗಿದೆ ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಓರ್ವ ಶಾಸಕನನ್ನು ಹೊಂದಿರುವ ಬಿಎಸ್ಪಿ, ಲೋಕಸಭೆಯಲ್ಲಿ ೧೦ ಹಾಗೂ ರಾಜ್ಯಸಭೆಯಲ್ಲಿ ೩ ಸಂಸದರನ್ನು ಹೊಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ