ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಳಸ ತಾಲೂಕಿನ ಶಕ್ತಿ ದೇವತೆ ಅನ್ನಪೂರ್ಣೇಶ್ವರಿ ಸನ್ನಿಧಿ ಮೊರೆಹೋಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ, ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ ಹಾಗೂ ಇಡೀ ಕುಟುಂಬ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಇಂದು ರಾತ್ರಿ ಹೊರನಾಡಿನಲ್ಲಿಯೇ ಉಳಿಯಲಿರುವ ಯಡಿಯೂರಪ್ಪ ಕುಟುಂಬ ನಾಳೆ ಬೆಳಗ್ಗೆ ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿಯಲ್ಲಿ ಚಂಡಿಕಾಯಾಗ ನಡೆಯಲಿದೆ ಎನ್ನಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ಯಡಿಯೂರಪ್ಪ ಕುಟುಂಬದ ಮೇಲೆ ಹಗೆತನ ಹೆಚ್ಚಾಗಿದ್ದು, ಶತ್ರುನಾಶ, ಅಭಿವೃದ್ಧಿಗಾಗಿ ಚಂಡಿಕಾಯಾಗ ಮಾಡುತ್ತಿದ್ದಾರೆ.