September 14, 2026
Monday, September 14, 2026
spot_img

ಮೈದಾನದಲ್ಲೇ ಕಿತ್ತಾಡಿಕೊಂಡ ಬುಮ್ರಾ-ಹಾರ್ದಿಕ್‌, ಸತತ ಸೋಲಿನ ಪ್ರೆಶರ್‌ ಕುತ್ತಿಗೆಗೆ ಬಂದಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಂಬೈ ಇಂಡಿಯನ್ಸ್‌ ತಂಡ ಸತತ ಸೋಲುಗಳನ್ನು ಅನುಭವಿಸುತ್ತಿದೆ. ಇತ್ತ ಹಾರ್ದಿಕ್‌ ಪಾಂಡ್ಯ ಕ್ಯಾಪ್ಟನ್ಸಿ ಕೂಡ ಜನರಿಗೆ ಅಸಮಾಧಾನ ತಂದಿದೆ.

ಜನರನ್ನು ಬಿಡಿ ಇದೀಗ ಪ್ಲೇಯರ್ಸ್‌ ನಡುವೆಯೇ ಅಸಮಾಧಾನದ ಹೊಗೆ ಆಡುತ್ತಿದೆ. ಇದಕ್ಕೆ ಕಾರಣ ಸಾಕಷ್ಟಿದೆ. ಅದ್ಭುತ ಫೀಲ್ಡರ್ ಎನಿಸಿಕೊಂಡಿರೋ ಸೂರ್ಯ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬದಲಿಸಲಾಗಿದೆ.ಬಾಲರ್​​ಗಳಿಗೆ ಫೀಲ್ಡಿಂಗ್ ಸೆಟ್ ಮಾಡುವ ಅವಕಾಶವನ್ನು ಹಾರ್ದಿಕ್ ನೀಡುತ್ತಿಲ್ಲ. ಈ ಬಗ್ಗೆ ಬೂಮ್ರಾ ಓಪನ್ ಆಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಹಾರ್ದಿಕ್ ತಮಗೆ ಅನುಗುಣವಾಗಿ ಫೀಲ್ಡಿಂಗ್ ನಿಲ್ಲಿಸುತ್ತಿದ್ದರು. ಆರಂಭದಲ್ಲಿ ಬೂಮ್ರಾ ವಾದಕ್ಕೆ ಇಳಿದರು. ಕೊನೆಗೆ ವಾದ ಮಾಡಿ ಪ್ರಯೋಜನ ಇಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಬೂಮ್ರಾ ಯಾರ ಮೇಲೂ ಸಿಟ್ಟು ಮಾಡಿಕೊಂಡವರಲ್ಲ. ಕೂಲ್ ಆಗಿ ಇರುತ್ತಾರೆ. ಆದರೆ, ಈಗ ಅವರ ಮುಖದಲ್ಲಿ ಅಸಮಾಧಾನ ಇರೋದು ಕಂಡುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !