ದಿಗಂತ ವರದಿ ವಿಜಯಪುರ:
ಸಾರಿಗೆ ಬಸ್- ಬೈಕ್ ಡಿಕ್ಕಿಯಾಗಿದ್ದಕ್ಕೆ ಬೈಕ್ ಸಾವಾರರು ಚಾಲಕನೊಂದಿಗೆ ಜಗಳ ಕಾಯ್ದು, ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಬಳಿ ನಡೆದಿದೆ.
ಇಲ್ಲಿನ ರಸ್ತೆಯಲ್ಲಿ ತೆರಳುತ್ತಿದ್ದಾಗ ಬಸ್- ಬೈಕ್ ಡಿಕ್ಕಿಯಾಗಿದ್ದು, ಕೆಳ ಬಿದ್ದ ಬೈಕ್ ಸವಾರರಿಬ್ಬರು ಆಕ್ರೋಶಗೊಂಡು, ಬಸ್ ಚಾಲಕ ಚಾಂದಪಟೇಲ್ ಬಿರಾದಾರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಬಸ್ ಚಾಲಕ ಬಿರಾದಾರ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.