ಹೊಸದಿಗಂತ ವರದಿ, ರಾಮನಗರ
ರಾಮನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಅನಾಹುತಗಳಾಗಿದೆ. ಇಂದು ಬೆಳಗ್ಗಿನ ಜಾವದಿಂದ ವ್ಯಾಪಕ ಮಳೆಯಾಗುತ್ತಿದೆ. ರಾಮನಗರ ಸಮೀಪ ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿದ್ದು, ಬಸ್, ಲಾರಿ, ಕಾರುಗಳು ನೀರಿನಲ್ಲಿ ತೇಲಾಡುತ್ತಿದೆ.
ಚನ್ನಪಟ್ಟಣ ಶೇರ್ವ ಸರ್ಕಲ್ ಬಳಿ ಕುನ್ನೀರುಕಟ್ಟೆ ಕೋಡಿ ಹೊಡೆದಿದೆ. ಪೇಟೆ ಕೇರಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ಧಾರೆ. ಸ್ಕೂಲ್-ಕಾಲೇಜು, ಕೆಲಸಕ್ಕೆ ಹೋಗಲು ಜನರ ಪರದಾಟ ನಡೆಸಿದ್ದು,
ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ. ರಾಮನಗರ, ಬಿಡದಿ, ಚನ್ನಪಟ್ಟಣ, ಬೈರಾಪಟ್ಟಣ ಬಳಿ ಅಸ್ತವ್ಯಸ್ತವಾಗಿದೆ. ಗೌರಿ-ಗಣೇಶ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಪರದಾಟ ನಡೆಸುವಂತಾಗಿದೆ.
ಚನ್ನಪಟ್ಟಣ ಶೇರ್ವ ಸರ್ಕಲ್ ಬಳಿ ಕುನ್ನೀರುಕಟ್ಟೆ ಕೋಡಿ ಹೊಡೆದಿದೆ. ಪೇಟೆ ಕೇರಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ಧಾರೆ. ಸ್ಕೂಲ್-ಕಾಲೇಜು, ಕೆಲಸಕ್ಕೆ ಹೋಗಲು ಜನರ ಪರದಾಟ ನಡೆಸಿದ್ದು, ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ. ರಾಮನಗರ, ಬಿಡದಿ, ಚನ್ನಪಟ್ಟಣ, ಬೈರಾಪಟ್ಟಣ ಬಳಿ ಅಸ್ತವ್ಯಸ್ತವಾಗಿದೆ. ಗೌರಿ-ಗಣೇಶ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ