ಜಮೀನಿಗೆ ನುಗ್ಗಿದ ಬಸ್: ಚಾಲಕನ ಸಮಯ ಪ್ರಜ್ಞೆ, ತಪ್ಪಿತು ಭಾರೀ ದುರಂತ

ಹೊಸದಿಗಂತ ವರದಿ, ವಿಜಯಪುರ:

ಚಲಿಸುತ್ತಿದ್ದ ಬಸ್ ಪಾಟಾ ಕಟ್ ಆಗಿ, ಬಸ್ಸೊಂದು ಜಮೀನಿಗೆ ನುಗ್ಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ರಸ್ತೆಯಲ್ಲಿ ನಡೆದಿದೆ.
ಬಸ್ ಚಾಲಕ ರಾಯಗೊಂಡ ಬಿರಾದಾರ ಸಮಯ ಪ್ರಜ್ಞೆಯಿಂದ 15 ಪ್ರಯಾಣಿಕರು ಪಾರಾಗಿದ್ದು, ಯಾರಿಗೂ ಹಾನಿಯಾಗಿಲ್ಲ. ಆದರೆ, ಬಸ್ ನಿರ್ವಾಹಕ ದಸ್ತಗಿರಿಸಾಬ ವಾಲೀಕಾರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ‌.
ಇನ್ನು ಚಾಲಕನ ಕಾರ್ಯಕ್ಕೆ ಪ್ರಯಾಣಿಕರು, ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!