ಹೊಸದಿಗಂತ ವರದಿ ರೋಣ :
ತಾಲೂಕಿನ ಜಕ್ಕಲಿ ಗ್ರಾಮದ ವಸತಿ ನಿಲಯದ ಬಳಿ ಸಾರಿಗೆ ಬಸ್ಸೊಂದು ಕಂದಕಕ್ಕೆ ಜಾರಿದ್ದು 15 ಪ್ರಯಾಣಿಕರು ಬಚಾವ್ ಆಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ಈ ದುಘ೯ಟನೆ ಸಂಭವಿಸಿದೆ.
ಮಾರನಬಸರಿ ಗ್ರಾಮದಿಂದ ಜಕ್ಕಲಿ ಮಾಗ೯ವಾಗಿ ಸಾರಿಗೆ ಸಂಸ್ಥೆಯ ಬಸ್ ಗದಗ ಕಡೆಗೆ ಹೊರಟಿತ್ತು.ಜಕ್ಕಲಿ ಗ್ರಾಮದಿಂದ ಸ್ವಲ್ಪ ದೂರದಲ್ಲಿದ್ದ ವಸತಿ ನಿಲಯದ ಬಳಿ ಬಸ್ ನ ಜೆಂಟ್ ಪಿನ್ ತುಂಡಾಗಿದ್ದರಿಂದ ಬಸ್ ಕಂದಕ್ಕೆ ಜಾರಿದ್ದು, ಚಾಲಕನ ಕತ೯ವ್ಯ ಪ್ರಜ್ಞೆಯಿಂದಾಗಿ 15 ಕ್ಕೂ ಹೆಚ್ಚು ಪ್ರಯಾಣಿಕರು ಕೂದಲಳತೆಯಿಂದ ಬಚಾವ್ ಆಗಿದ್ದಾರೆ.
ರೋಣ ಸಾರಿಗೆ ಸಂಸ್ಥೆಯು ತಾಲೂಕಿನ ಗ್ರಾಮೀಣ ಭಾಗಗಳಿಗೆ ಡಕೋಟ ಬಸ್ ಓಡಿಸುತ್ತಿದ್ದು ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಪ್ರಯಾಣಿಕರು ತಮ್ಮ ಆಕ್ರೋಶವನ್ನು ಹೊರಹಾಕಿದರು.