ಸೇನೆ ಸೇರಬೇಕೆಂಬ ಕನಸು ಹೊತ್ತು ಓಡುತ್ತಿರುವ ಯುವಕ: ‘ಆತ್ಮನಿರ್ಭರ್​’ ಎಂದ ಉದ್ಯಮಿ ಆನಂದ್​ ಮಹೀಂದ್ರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಸೇನೆ ಸೇರಬೇಕೆಂಬ ಕನಸಿನ ಮೂಟೆ ಹೊತ್ತು ದಿನ ರಾತ್ರಿ ವೇಳೆ 10 ಕಿಲೋಮೀಟರ್​ ಓಡುವ ಅಭ್ಯಾಸ ರೂಢಿಸಿಕೊಂಡಿರುವ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.

ವಿಡಿಯೋ ನೋಡಿ ಖುಶಿ ಪಟ್ಟು ಕಮೆಂಟ್​ ಮಾಡಿರುವ ಉದ್ಯಮಿ ಆನಂದ್​ ಮಹೀಂದ್ರಾ, ‘ಯುವಕ ನಿಜಕ್ಕೂ ಸ್ಫೂರ್ತಿದಾಯಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ಈ ವಿಡಿಯೋವನ್ನು ಟ್ಯಾಗ್​ ಮಾಡಿರುವ ಒಬ್ಬರು, ಯುವಕನಿಗೆ ಯಾವ ರೀತಿಯಲ್ಲಾದರೂ ಸಹಾಯ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್​ ಮಹೀಂದ್ರಾ, ಯುವಕನ ಶ್ರದ್ಧೆ ನಿಜಕ್ಕೂ ಸ್ಫೂರ್ತಿದಾಯಕ. ಈತನಿಗೆ ಯಾರ ಸಹಾಯದ ಅಗತ್ಯವಿಲ್ಲ. ಅವನು ‘ಆತ್ಮನಿರ್ಭರ’ ಎಂದು ಬರೆದಿದ್ದಾರೆ.

ಗಾಯಕ ಬಾದ್​ಶಾ ಸಹ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ‘ನಮ್ಮ ದೇಶದ ಭವಿಷ್ಯ ದೃಢ ವ್ಯಕ್ತಿಗಳ ಕೈಯಲ್ಲಿದೆ’ ಎಂದಿದ್ದಾರೆ.

19 ವರ್ಷದ ಉತ್ತರಾಖಂಡದ ಯುವಕ ಪ್ರದೀಪ್​ ದೆಹಲಿಯ ಮೆಕ್​ಡೊನಾಲ್ಡ್​ನಲ್ಲಿ ಕೆಲಸ ಮಾಡುತ್ತಿದ್ದು, ಭಾರತೀಯ ಸೇನೆ ಸೇರಬೇಕೆಂಬ ಗುರಿ ಹೊಂದಿದ್ದಾನೆ. ಇದಕ್ಕಾಗಿ ಈತ ಪ್ರತಿದಿನ ರಾತ್ರಿ ಕೆಲಸ ಮುಗಿಸಿಕೊಂಡು 10 ಕಿಲೋ ಮೀಟರ್​ ದೂರ ಇರುವ ತನ್ನ ಮನೆಗೆ ಓಡುತ್ತಲೇ ದಾರಿಯನ್ನು ಕ್ರಮಿಸುತ್ತಾನೆ. ಚಲನಚಿತ್ರ ನಿರ್ಮಾಪಕ ವಿನೋದ್​ ಕಪ್ರಿ ಅವರು ಯುವಕ ಪ್ರದೀಪ್​ ಓಡುತ್ತಿದ್ದಾಗ ಆತನಿಗೆ ಸಹಾಯ ಬೇಕೆ ಎಂದು ಕೇಳಿದಾಗ ತಾನು ಓಡುತ್ತಿರುವುದರ ಉದ್ದೇಶ ತಿಳಿಸಿದ್ದಾನೆ. ಈ ವಿಡಿಯೋವನ್ನು ವಿನೋದ್​ ಕಪ್ರಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!