ಹೊಸದಿಗಂತ ವರದಿ, ಕಲಬುರಗಿ:
ಸಚಿವ ಸಂಪುಟ ವಿಸ್ತರಣೆ ಮಾಡುವ ಪ್ರಕ್ರಿಯೆ ಪಕ್ಷದ ಹೈಕಮಾಂಡ್, ಗೆ ಬಿಟ್ಟ ವಿಚಾರವೆಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಚಾರದಲ್ಲಿ ನಾನಾಗಲಿ,ರಾಜ್ಯ ನಾಯಕರಾಗಲ ಯಾವುದೇ ತೀಮಾ೯ನ ತೆಗೆದುಕೊಳ್ಳುವಂತಿಲ್ಲ.ಆದರೆ ಒಂದು ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.
ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಗುಣವಾಗಿದ್ದಾರೆ.ಯಾರು ಸಹ ಆತಂಕ ಪಡುವ ಅವಶ್ಯಕತೆ ಇಲ್ಲ. ಸಕಾ೯ರ ಅವರಿಗೆ ಸಂಪೂರ್ಣ ಚಿಕಿತ್ಸೆ ನೀಡಲು ಸಿದ್ದವಿದೆ.ಆದರೆ ನನಗೆ ದೇವರು ಕರೆಯುತ್ತಿದ್ದು,ಯಾವುದೇ ರೀತಿಯ ಚಿಕಿತ್ಸೆ ಬೇಡವೆಂದು ಹೇಳಿದ್ದಾರೆ.
ಶ್ರೀಗಳಿಗೆ ವಿಶೇಷವಾದ ದಿವ್ಯ ಶಕ್ತಿಯಿದೆ.ನಾನು ಸೋಮವಾರ ಮತ್ತೆ, ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಣೆ ಮಾಡಲಿದ್ದೇನೆ.ಭಕ್ತರು ತಮ್ಮ ತಮ್ಮ ಮನೆಯಲ್ಲಿ ಇದ್ದುಕೊಂಡು ಅವರಿಗಾಗಿ ಪ್ರಾಥ೯ನೆ ಮಾಡಬೇಕು ಎಂದರು.