ಕರೆಯೋದು ಅವರ ಹಕ್ಕು, ಹೋಗೋದು ಬಿಡೋದು ನಮ್ಮ ಸ್ವಾತಂತ್ರ್ಯ: ಸಚಿವ ಶಿವರಾಮ ಹೆಬ್ಬಾರ್

ಹೊಸದಿಗಂತ ವರದಿ ಶಿವಮೊಗ್ಗ :

ಕರೆಯೋದು ಅವರ ಹಕ್ಕು, ಹೋಗೋದು ಬಿಡೋದು ನಮ್ಮ ಸ್ವಾತಂತ್ರ್ಯ.ಕಾಂಗ್ರೆಸ್ ಪಕ್ಷದ ಬಿಟ್ಟಾಗ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಏನು ಹೇಳಿದ್ದಾರೆ ಎಂಬುದು ನಮಗೂ ನೆನಪಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ವಿಭಾಗ ಮಟ್ಟದ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲಾ ಬೇರೆ ಪಕ್ಷದಿಂದ ಬಂದಿದ್ದೇವೆ. ಪುನಃ ಅಲ್ಲಿಗೆ ಹೋಗುವ ಸಂದರ್ಭವೇ ಇಲ್ಲ. ಸಿದ್ದರಾಮಯ್ಯನವರ ಮಾತು ಕೇಳಿದ ಬಳಿಕವಂತೂ ಆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹಳಿಯಾಳವೂ ಬಿಜೆಪಿ ವಶವಾಗಲಿದೆ. ಅದಕ್ಕೆ ಬೇಕಾದ ಸಂಘಟನೆ ಮಾಡಲಾಗುತ್ತಿದೆ. ವಿಭಾಗ ಮಟ್ಟದ ಕಾರ್ಯಕಾರಿಣಿ ಗೆಲುವಿಗೆ ಇನ್ನಷ್ಟು ಸಹಾಯವಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!