ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಗೋ ನಿಷೇಧ ಅವಧಿ ಮುಗಿದರೂ, ನಾನು ಮಾತ್ರ ಇನ್ನು ಇಂಡಿಗೋ ವಿಮಾನ ಹತ್ತಲಾರೆ ಎಂದು ಎಲ್ಡಿಎಫ್ ಸಂಚಾಲಕ ಇಪಿ ಜಯರಾಜನ್ ಹೇಳಿದ್ದಾರೆ.
ವಿಮಾನ ಪ್ರಯಾಣ ನಿಷೇಧ ವಿಧಿಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನನ್ನ ನಿಷೇಧ ಅವಧಿ ಮುಗಿಯಬಹುದು ಆದರೆ ನಿಷೇಧಾಜ್ಞೆ ಮುಗಿದರೂ ಇಂಡಿಗೋ ವಿಮಾನ ಹತ್ತುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜೂನ್ 13 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಿಮಾನದಲ್ಲಿ ಪ್ರತಿಭಟನೆ ನಡೆದಿತ್ತು. ಘಟನೆ ವಿವಾದವಾದ ನಂತರ, ಇಂಡಿಗೋ ಎರಡೂ ಪಕ್ಷಗಳ ವಿರುದ್ಧ ಕ್ರಮ ಕೈಗೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ