ದರ್ಶನ್ ಗೆ ಯಾಕೆ ಹೀಗಾಯ್ತು ಎಂದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ವಿನೋದ್ ರಾಜ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಇಂದು ನಟ ವಿನೋದ್ ರಾಜ್ ಆಗಮಿಸಿದ್ದು, ಆದರೆ ಪೊಲೀಸರು ಭೇಟಿಗೆ ಅವಕಾಶ ನೀಡಿಲ್ಲ. ಹಾಗಾಗಿ ದರ್ಶನ್ ಭೇಟಿಯಾಗದೇ ಹಿಂತಿರುಗಿರುವ ಘಟನೆ ನಡೆದಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿನೋದ್ ರಾಜ್, ದಿನಕ್ಕೆ ಒಂದೇ ಭೇಟಿಗೆ ಅವಕಾಶವಿದೆ. ಹಾಗಾಗಿ ಈಗ ಭೇಟಿಯಾಗಿಲ್ಲ. ಮಧ್ಯಾಹ್ನದ ಬಳಿಕ ಮತ್ತೆ ದರ್ಶನ್ ಮನೆಯವರ ಜೊತೆ ಬರುತ್ತೇನೆ ಎಂದರು.

ಕೆಲ ನಡೆಯಬಾರದ ಘಟನೆಗಳು ನಡೆದುಹೋಗುತ್ತವೆ. ಯಾಕೆ ಈ ರೀತಿ ಘಟನೆಗಳು ಆಯಿತು ಅನ್ನಿಸುತ್ತವೆ. ಅಚಾತುರ್ಯ ಅಂತಷ್ಟೇ ಹೇಳುತ್ತೇನೆ. ನಮ್ಮ ತಾಯಿಗೆ ದರ್ಶನ್ ಮೇಲೆ ತುಂಬಾ ಪ್ರೀತಿ ಇತ್ತು. ಅವರು ಮಂಚದಲ್ಲಿ ಮಲಗಿದ್ದಾಗಲೂ ದರ್ಶನ್ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ತಾಯಿ ಜೊತೆ ದರ್ಶನ್ ತಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ನನ್ನ ತಾಯಿ ಆರೋಗ್ಯ ಸರಿ ಇಲ್ಲದಾಗ ದರ್ಶನ್ ಬಂದು ಮಾತನಾಡಿಸಿದ್ದರು. ಒಂದು ಕಡೆ ಪ್ರಾಣ ಕಳೆದುಕೊಂಡಿರುವ ಕುಟುಂಬದ ನೋವು. ಇನ್ನೊಂದು ಕಡೆ ನಟನೊಬ್ಬನ ಈ ಸ್ಥಿತಿ ಎಂದು ಬೇಸರಿಸಿದರು.

ದರ್ಶನ್ ಎರಡನೇ ಬಾರಿ ಜೈಲಿಗೆ ಹೋಗಿರುವುದನ್ನು ನೋಡಿದರೆ ಮತ್ತೆ ಯಾಕೆ ಹೀಗಾಯ್ತು ಎಂದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!