ಹೊಸದಗಿಂತ ಡಿಜಿಟಲ್ ಡೆಸ್ಕ್
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೆರೆ ಸಿಕ್ಕಿರುವ ಪಾಕಿಸ್ತಾನಿ ಭಯೋತ್ಪಾದಕನಿಗೆ ಭಾರತೀಯ ಸೇನಾ ನೆಲೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಯು 30,000 ರೂ. ಗಳನ್ನು ಕೊಟ್ಟಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿಯ ಸಬ್ಜ್ಕೋಟ್ ಗ್ರಾಮದ ನಿವಾಸಿ ಮೂವತ್ತೆರಡರ ಹರೆಯದ ತಬಾರಕ್ ಹುಸೇನ್ ನನ್ನು ಭಾನುವಾರ ನೌಶೇರಾ ಸೆಕ್ಟರ್ನಲ್ಲಿ ಬಂಧಿಸಲಾಗಿತ್ತು. ಅವನ ಸಹಚರರು ಅವನನ್ನು ತೊರೆದು ಹಿಂತಿರುಗಿ ಓಡಿಹೋಗಿದ್ದರು. ಈ ವೇಳೆ ಭಾರತೀಯ ಸೈನಿಕರು ಆತನನ್ನು ಬಂಧಿಸಿದ್ದರು.
ಕಳೆದ ಆರು ವರ್ಷಗಳಲ್ಲಿ ಹುಸೈನ್ ಎರಡನೇ ಬಾರಿಗೆ ಭಾರತೀಯ ಸೈನಿಕರಕೈಗೆ ಸಿಕ್ಕಿಬಿದ್ದಿದ್ದಾನೆ. ಗಡಿಯಾಚೆಯಿಂದ ಈ ಭಾಗಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 21 ರಂದು ಝಂಗಾರ್ ಭಾಗದಲ್ಲಿ ಎಲ್ಒಸಿ ಆಚೆಯಿಂದ ಇಬ್ಬರು-ಮೂವರು ಭಯೋತ್ಪಾದಕರ ಚಲನೆಯನ್ನು ಗುರುತಿಸಿದರು.
ಒಬ್ಬ ಭಯೋತ್ಪಾದಕ ಭಾರತೀಯ ಪೋಸ್ಟ್ನ ಸಮೀಪಕ್ಕೆ ಬಂದು ಬೇಲಿಯನ್ನು ಕತ್ತರಿಸಲು ಪ್ರಯತ್ನಿಸುತ್ತಿದ್ದ. ಭಾರತೀಯ ಸೈನಿಕರು ಸುತ್ತುವರೆದಾಗ ಒಬ್ಬ ಸಿಕ್ಕಿ ಉಳಿದವರು ಪರಾರಿಯಾದರು.
ಬಂಧಿತ ಭಯೋತ್ಪಾದಕ ತನ್ನ ಗುರುತನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್ಕೋಟ್ ಗ್ರಾಮದ ನಿವಾಸಿ ಹುಸೇನ್ ಎಂದು ಬಹಿರಂಗಪಡಿಸಿದ್ದಾನೆ ಎಂದು ಬ್ರಿಗೇಡಿಯರ್ ರಾಣಾ ಹೇಳಿದ್ದಾರೆ.
ಹೆಚ್ಚಿನ ವಿಚಾರಣೆಯಲ್ಲಿ, ಭಯೋತ್ಪಾದಕ ಭಾರತೀಯ ಸೇನಾ ಪೋಸ್ಟ್ ಮೇಲೆ ದಾಳಿ ಮಾಡುವ ಯೋಜನೆಯನ್ನು ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಅವರು ತನಗೆ 30,000 ರೂಪಾಯಿ (ಪಾಕಿಸ್ತಾನಿ ಕರೆನ್ಸಿ) ಪಾವತಿಸಿದ್ದರು ಎಂದು ಹುಸೇನ್ ಬಹಿರಂಗಪಡಿಸಿದ್ದಾನೆ.
ಭಾರತೀಯ ಪೋಸ್ಟ್ ಅನ್ನು ಗುರಿಯಾಗಿಸಲು ಕರ್ನಲ್ ಚೌಧರಿ ಆಗಸ್ಟ್ 21 ರಂದು ಸೂಚಿಸಿದ್ದರು ಎಂದು ಎಂದು ಬ್ರಿಗೇಡಿಯರ್ ರಾಣಾ ಹೇಳಿದ್ದಾರೆ. ಹುಸೇನ್ ಅವರು ಭಯೋತ್ಪಾದನೆಯೊಂದಿಗೆ ತಮ್ಮ ಸುದೀರ್ಘ ಒಡನಾಟವನ್ನು ಒಪ್ಪಿಕೊಂಡಿದ್ದಾನೆ. ಆತ ಪಾಕಿಸ್ತಾನದ ಸೇನೆಯ ಮೇಜರ್ ರಜಾಕ್ ಅವರಿಂದ ತರಬೇತಿ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ನಾನು ಆರು ತಿಂಗಳ ತರಬೇತಿಯನ್ನು ಪಡೆದಿದ್ದೇನೆ ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಸದಸ್ಯರಿಗೆ (ಪಾಕಿಸ್ತಾನ ಸೇನೆಯು ನಡೆಸುತ್ತಿರುವ) ಹಲವಾರು (ಭಯೋತ್ಪಾದಕ) ಶಿಬಿರಗಳಿಗೆ ಭೇಟಿ ನೀಡಿದ್ದೇನೆ ಎಂದು ಆತ ಒಪ್ಪಿಕೊ೦ಡಿದ್ದಾನೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ