ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಬಾಲಾ ಜಿಲ್ಲೆಯ ಇಸ್ಮಾಯಿಲ್ಪುರ ಗ್ರಾಮದ ಬಳಿ ಕಾರು ಕಾಲುವೆಗೆ ಬಿದ್ದಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಕುಲ್ಬೀರ್ ಸಿಂಗ್, ಕಲಲ್ಜೀತ್ ಕೌರ್, ಜಶನ್ಪ್ರೀತ್ ಕೌರ್ ಮತ್ತು ಖುಷ್ದೀಪ್ ಕೌರ್ ಮೃತರು.
ಕುಲ್ಬೀರ್ ಸಿಂಗ್ ಕುಟುಂಬ ಮಾರುತಿ ಕಾರ್ನಲ್ಲಿ ಪ್ರಯಾಣಿಸುತ್ತಿದ್ದು, ಕಾಲುವೆಗೆ ಬಿದ್ದಿದೆ. ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಕಾರು ಹಾಗೂ ನಾಲ್ವರ ಮೃತದೇಹವನ್ನು ಹೊರತೆಗೆಯಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ