ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆಯ ಹುಣಸೇಕಟ್ಟೆ ಬಳಿ ಚಲಿಸುತ್ತಿದ್ದ ಕಾರ್ನ ಟೈರ್ ಬರ್ಸ್ಟ್ ಆಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಟೈರ್ ಸಿಡಿದ ರಭಸಕ್ಕೆ ಸೇತುವೆ ಮೇಲಿಂದ ಕಾರು ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾವಣಗೆರೆಯ ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ನಿವಾಸಿ ಕೊಟ್ರೇಶಪ್ಪ (60) ಹುಬ್ಬಳ್ಳಿಯ ಈರಮ್ಮ (54) ಮೃತಪಟ್ಟವರು. ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ,
ದಾವಣಗೆರೆಯ ಕೆಎಚ್ಬಿ ಕಾಲೊನಿಯ ನಿವಾಸಿ ಕೊಟ್ರೇಶಪ್ಪ ಮದುವೆ ಮುಗಿಸಿ ಕೊಂಡು ಈರಮ್ಮ ಅವರ ಜೊತೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಕಾರಿನ ಟೈರ್ ಒಮ್ಮೆಲೆ ಸ್ಫೋಟಗೊಂಡಿದೆ.