ಧ್ವಜಾರೋಹಣ ವೇಳೆ ಅಚಾತುರ್ಯ: ಸಚಿವ ಸಿ.ಸಿ.ಪಾಟೀಲ ಗರಂ

ಹೊಸದಿಗಂತ ವರದಿ, ಬಾಗಲಕೋಟೆ:
ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲರು ಸಿದ್ದವಾದಾಗ ಧ್ವಜ ತಕ್ಷಣ ಹಾರಾಟ ನಡೆಸಲಿಲ್ಲ.
ಆ ಬಳಿಕ ಧ್ವಜವನ್ನು ಕೆಳಗಿಳಿಸಿ ನಂತರ ಧ್ವಜವನ್ನು ಹಾರಸಿದ ಪ್ರಸಂಗ ನಡೆಯಿತು. ‌ಜಿಲ್ಲಾಡಳಿತವು ಸರಿಯಾಗಿ ಧ್ವಜವನ್ನು ಹಾರಿಸಲು ಸಿದ್ದತೆ ಮಾಡಿಕೊಳ್ಳದಿರುವುದು ಕಂಡುಬಂದಿತು. ಧ್ವಜವನ್ನು ಕೆಳಗಿಳಿಸಿ ಹಾರಿಸಿದ್ದರಿಂದ ಧ್ವಜದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಸಿಬ್ಬಂದಿಗಳ ವಿರುದ್ಧ  ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲರು ಗರಂ ಆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!