ಕಾರ್, ಬೈಕ್‌ಗಳಿಗೆ ದುಷ್ಕರ್ಮಿಗಳಿಂದ ಕಲ್ಲೆಸೆತ

ಹೊಸದಿಗಂತ ವರದಿ ಕಲಬುರಗಿ:

ಮನೆಯ ಮುಂದುಗಡೆ ನಿಲ್ಲಿಸಿರುವ ಕಾರ್,ಬೈಕ್ ಮತ್ತು ಆಟೋ,ಗಳಿಗೆ ದುಷ್ಕರ್ಮಿಗಳು ಕಲ್ಲೆಸೆದ ಪುಡಿ ಪುಡಿ ಮಾಡಿರುವ ಘಟನೆ ನಗರದ ಸಂತೋಷ ಕಾಲೋನಿ ಬಡಾವಣೆಯಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಸಂತೋಷ ಕಾಲೋನಿಯ ವ್ಯಾಪ್ತಿಯಲ್ಲಿ ಬರುವ ಹಲವು ಆಟೋ,ಬೈಕ್ ಮತ್ತು ಕಾರ್,ಗಳಿಗೆ ಕಲ್ಲಿನಿಂದ ಹೊಡೆದು ಸಾವಿರಾರು ರೂಪಾಯಿ ಬೆಲೆಬಾಳುವ ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ.

ಸುಮಾರು ಹತ್ತಕ್ಕೂ ಅಧಿಕ ಕಾರ ಮತ್ತು ಆಟೋಗಳನ್ನು ಪುಡಿ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಸಹ ಇದೇ ರೀತಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

ಪೋಲಿಸರ ವಿರುದ್ಧ ಸಾವ೯ಜನಿಕರ ಆಕ್ರೋಶ ಹಾಗೂ ದುಷ್ಕರ್ಮಿಗಳ ಅಟ್ಟಹಾಸ ಸಿಸಿಟಿವಿ ಫೂಟೆಜ್,ನಲ್ಲಿ ಸೆರೆ ಸಿಕ್ಕಿದ್ದು,ರಾಘವೇಂದ್ರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!