ಕೇಂದ್ರದ ಬಜೆಟ್ ಅಮೃತ ಕಾಲದ ಮೊದಲ ಬಜೆಟ್ : ವಿರೇಶ್ ನೀಲಾ

ಹೊಸದಿಗಂತ ವರದಿ ಕಲಬುರಗಿ :

ಕೇಂದ್ರದ ಹಣಕಾಸು ಸಚಿವೆ ನಿಮ೯ಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ಇದು ದೇಶದ ಅಮೃತ ಕಾಲದ ಮೊದಲ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮೋರ್ಚಾದ ಕಲಬುರಗಿ ನಗರದ ಉಪಾಧ್ಯಕ್ಷ ವಿರೇಶ್ ನೀಲಾ ತಿಳಿಸಿದ್ದಾರೆ.

ಈ ಬಜೆಟ್ ಹಿಂದಿನ ಬಜೆಟ್ ಹಾಕಿದ ಅಡಿಪಾಯದ ಮೇಲಿನ ಮತ್ತು ನೂರು ವರ್ಷಗಳಿಗೆ ಹಾಕಲ್ಪಟ್ಟ ಭಾರತದ ನೀಲ ನಕ್ಷೆ ಮೇಲಿನ ನಿರ್ಮಾಣದ ಭರವಸೆ ಹೊಂದಿದೆ. ನಮ್ಮ ಯುವಕರು, ಮಹಿಳೆಯರು , ಕೃಷಿಕರು ,
ಎಸ್ ಸಿ, ಎಸ್ ಟಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದಾಗಿದೆ ಎಂದು ಹೇಳಿದರು.

ಭಾರತ ಉಜ್ವಲ ಭವಿಷ್ಯದೊಂದಿಗೆ ಹೆಜ್ಜೆ ಹಾಕುತ್ತಿದೆ , ಇಡೀ ಜಗತ್ತೇ ಭಾರತದ ಸಾಧನೆಯನ್ನು ಶ್ಲಾಘಿಸಿದೆ. ಭಾರತವು ಆರ್ಥಿಕತೆಯಲ್ಲಿ ವಿಶ್ವದಲ್ಲಿಯೇ ಮುನ್ನುಗುತ್ತಿದೆ, ಭಾರತ ದೇಶದ ಸರ್ವವ್ಯಾಪಿ ಹಾಗೂ ಸರ್ವ ಜನಾಂಗದ ಆಶಯಗಳನ್ನು ಸಾಕರಗೊಳಿಸುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!