ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಮಹತ್ವದ ಸ್ಥಾನ ಪಡೆದ ಬಿ.ಎಲ್‌. ಸಂತೋಷ್, ಯಡಿಯೂರಪ್ಪ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸಂಸದೀಯ ಮಂಡಳಿ ಹಾಗು ಚುನಾವಣಾ ಸಮಿತಿ ಎರಡಲ್ಲೂ ಬಿ.ಎಲ್‌. ಸಂತೋಷ್ , ಬಿ. ಎಸ್‌. ಯಡಿಯೂರಪ್ಪ ಅವರು ಸ್ಥಾನ ಪಡೆದಿದ್ದಾರೆ.

ಈ ಸಂಬಂಧ ಎರಡೂ ಸಮಿತಿಗಳನ್ನು ಪುನಾರಚನೆ ಮಾಡಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ.

ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರನ್ನು ಕೇಂದ್ರೀಯ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಚುನಾವಣಾ ಸಮಿತಿಗೆ ಈ ಸಲ ಹೈಕಮಾಂಡ್‌ ದೇವೇಂದ್ರ ಫಡ್ನವೀಸ್‌ಗೆ ಮಣೆ ಹಾಕಿದೆ.

ಇನ್ನುಳಿದಂತೆ, ಸಂಸದೀಯ ಮಂಡಳಿಯಲ್ಲಿ ಸುಧಾ ಯಾದವ್, ಇಕ್ಬಾಲ್, ಸರ್ಬಾನಂದ ಸೋನೋವಾಲ್, ಕೆ ಲಕ್ಷ್ಮಣ್ ಅವರನ್ನು ಹೊಸ ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್‌ ಸಿಂಗ್‌ ಹಾಗು ಜೆ ಪಿ ನಡ್ಡಾ ಮಂಡಳಿಯಲ್ಲಿದ್ದಾರೆ.

ಸಂಸದೀಯ ಮಂಡಳಿಯ ಸದಸ್ಯರು:

ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷರು)
ನರೇಂದ್ರ ಮೋದಿ
ರಾಜನಾಥ್ ಸಿಂಗ್
ಅಮಿತ್ ಶಾ
ಬಿ. ಎಸ್. ಯಡಿಯೂರಪ್ಪ
ಸರ್ಬಾನಂದ ಸೋನೋವಾಲ್
ಕೆ. ಲಕ್ಷ್ಮಣ್
ಇಕ್ಬಾಲ್ ಸಿಂಗ್ ಲಾಲ್ಪುರ
ಸುಧಾ ಯಾದವ್
ಸತ್ಯನಾರಾಯಣ ಜಟಿಯಾ
ಬಿ.ಎಲ್.ಸಂತೋಷ್ (ಕಾರ್ಯದರ್ಶಿ)

ಕೇಂದ್ರ ಚುನಾವಣಾ ಸಮಿತಿಯ ಸದಸ್ಯರು:

ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷರು)
ನರೇಂದ್ರ ಮೋದಿ
ರಾಜನಾಥ್ ಸಿಂಗ್
ಅಮಿತ್ ಶಾ
ಬಿ.ಎಸ್. ಯಡಿಯೂರಪ್ಪ
ಸರ್ಬಾನಂದ ಸೋನೋವಾಲ್
ಕೆ. ಲಕ್ಷ್ಮಣ್
ಇಕ್ಬಾಲ್ ಸಿಂಗ್ ಲಾಲ್ಪುರ
ಸುಧಾ ಯಾದವ್
ಸತ್ಯನಾರಾಯಣ ಜಾತಿಯ
ಭೂಪೇಂದ್ರ ಯಾದವ್
ದೇವೇಂದ್ರ ಫಡ್ನವೀಸ್
ಬಿ.ಎಲ್.ಸಂತೋಷ್ (ಕಾರ್ಯದರ್ಶಿ)
ವಿ ಶ್ರೀನಿವಾಸ್ (ಮಾಜಿ ಅಧಿಕಾರಿ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!